Nov 24, 2011

ಪೂರ್ವಿತನ ಪ್ರವರ

ಎರಡು ವರ್ಷದ ಮಗುವಿನ ಬುದ್ಧಿವಂತಿಕೆ ನಿಜವಾಗಿಯೂ ಅಚ್ಚರಿ ಹುಟ್ಟಿಸುವಂತಹದ್ದು..!
ಅತ್ತೆ ಮಾಮ ಮನೆಗೆ ಬಂದಿದ್ದಾರೆ.ಪಾಪುಆಜ್ಜಿಯ ಹತ್ತಿರ  ಸ್ನಾನಮಾಡಿಸಿಕೊಂಡು
ಅಮ್ಮನ ಹತ್ತಿರ ಬಂದು ,ಮೈ ಒರೆಸಿ ಕೊಂಡು,ಬಟ್ಟೆ ಹಾಕಿಸಿಕೊಂಡು ಮುದ್ದಾಗಿ
ದಿವಾನ್ ಮೇಲೆ ಕುಳಿತಿತು .ಪಕ್ಕದಲ್ಲೇ ಕುಳಿತ ಮಾಮ ಸುಮ್ಮನೆ ಕುಳಿತಿರಲು
ಬೇಸರವಾದ ಕಾರಣ ಹಿಂದಿನ ದಿನ ಭಾವ ಆಡಲು ತಂದಿದ್ದ ಕಾರ್ಡ್ಸ್ ಬಾಕ್ಸ್
ತೆಗೆದುಕೊಂಡು "ಪೂರ್ವಿ ನಾನು ನೀನು ಕಾರ್ಡ್ಸ್ಆಡೋಣಪ್ಪಎಂದಾಗ'ಮುದ್ದಾಗಿ ಆಯಿತು
ಎಂದು ತಲೆ ಆಡಿಸಿ ಮಾಮನಿಗೆ ಎದುರಾಗಿ ಕುಳಿತ."ನಾನು ನಿಂಗೆ ಹೇಳಿಕೊಡ್ತೀನಿ,
ಆಯ್ತಾ ನೋಡು,ಈಕಾರ್ಡ್ ಹೀಗೆ ಹಿಡಿದುಕೊ". ಎಂದು ಕಾರ್ಡ ಜೋಡಿಸಿಕೊಟ್ಟರು.
ನೀಟಾಗಿ ದೊಡ್ಡವರ ಹಾಗೆ ಜೋಡಿಸಿಕೊಟ್ಟ  ಕಾರ್ಡ್ಸ್ ಅನ್ನು ಹಿಡಿದು ಗಂಭೀರವಾಗಿ
ಮಾಮನ ಆದೇಶಕ್ಕಾಗಿ ನೋಡುತ್ತಿದ್ದಾನೆ.ಅಮ್ಮ ಮಾಮ  ಅತ್ತೆ ಅಜ್ಜಿಯರಿಗೆ ಅವನು ಕುಳಿತ
ವೈಖರಿಗೆ ನೋಡಿ ಅಚ್ಚರಿ,ಕುತೂಹಲ.ಸರಿ, ಮಾಮ, "ನೋಡ್ರಿ ನಿಮ್ಮ ಮಗ ಹೇಗೆ ಆಡ್ತಿದ್ದಾನೆ
ನನ್ನ ಜೊತೆ," ಎಂದು. ಇರು, "ನಿನ್ನ ಫೋಟೋ ತೆಗೆದು ನಿಮ್ಮ ಪಪ್ಪಾನಿಗೆ ತೋರಿಸುತ್ತೇನೆ ಆಯ್ತಾ"
ಎಂದು ಹೇಳಿ ಅವನ ಫೋಟೋ ಹಿಡಿದರು.ನಂತರ ಅವರ ಅಮ್ಮ ,ಪೂರ್ವಿ ಇರು
ಪಪ್ಪನಿಗೆ ಹೇಳ್ತೇನೆ ಎಂದದ್ದಕ್ಕೆ ಗಂಭೀರವಾಗಿ(ಕೋಪವಿಲ್ಲ, ಏನೋ ಯೋಚಿಸುವಂತೆ 
ಅವರ ಅಮ್ಮನನ್ನೇ ಎರಡು ನಿಮಿಷ ನೋಡುತ್ತಾ"ಆಯಿ "..ಎಂದ. (ಅವನ ಭಾಷೆಯಲ್ಲಿ ನಾಯಿ)
ಮತ್ತೆ,  ಪಪ್ಪನಿಗೆ ಹೇಳಲಾ ?ಎಂದದ್ದಕ್ಕೆ ,ಪೂರ್ವಿ, "ಬಾ.."(.ಬೇಡ)ಎಂದ .
ಫೋಟೋ ತೆಗೆದಿದ್ದಾಯಿತು ,ಅಚ್ಚರಿಪಟ್ಟಿದ್ದು, ನಕ್ಕಿದ್ದು ಎಲ್ಲ ಆಯಿತು.ಇಪ್ಪತ್ತು
ನಿಮಿಷ ಬಿಟ್ಟು ಅವನ ಪಪ್ಪಾ ಬಂದ.ಪ್ರಾಣ ಪ್ರಿಯನಾದ ಅಪ್ಪನ ಬಳಿ ಖುಷಿಯಿಂದ ಹೋದ
ಮಗುವಿಗೆ, ಅಮ್ಮ ಕಾಯುತ್ತಿದ್ದವಳಂತೆ," ನೋಡಿ ಇವನು
ಅವರ ಮಾಮನ ಜೊತೆ ಕಾರ್ಡ್ಸ್  ಆಡುತ್ತಿದ್ದ", ಎಂದಳು. ಅವನ ಅಪ್ಪ, "ಏನೋ.., ಎಂದು ಅವನೆಡೆ
ಅವನ ಪಪ್ಪಾಕೋಪದಿಂದ ನೋಡಿದಾಗ ತನ್ನ ನಗುವಿನಲ್ಲೇ ಮರೆಸಲು ಪ್ರಯತ್ನಿಸಿದ,
ನೋಡೋಣ ಎಂದು ಮತ್ತೆ ಗದರಿದಂತೆ, ಹೌದೇನೋ..,ಎಂದರೆ, ಸದ್ದಿಲ್ಲದಂತೆ ತಲೆ ತಗ್ಗಿಸಿ
ಕುಳಿತಿದ್ದಾನೆ.ಹಾಗೆ ಮತ್ತೆ ಗದರುವಾಗ ಕಣ್ಣಲ್ಲಿ ನೀರು ತುಂಬಿದೆ.ಅಪ್ಪನ ಮನಸು
ತಡೆಯುವುದೇ ?ಅವನ್ನನ್ನು ಎತ್ತಿಕೊಂಡು ಇನ್ನುಮೇಲೆ ಆಡಬಾರದು ಆಯ್ತಾ
ಜಾಣ ಎಂದು ರಮಿಸಿ ಮುದ್ದಿಸಿದ.ಮತ್ತದೇ ಎರಡು ನಿಮಿಷ ಬಿಟ್ಟು ಅವರ ಮಾಮ
"ಏನಪ್ಪಾ ಪೂರ್ವಿ ಕಾರ್ಡ್ಸ್ ಆಟ ಆಡೋಣವಾ ". ಎಂದರೆ...ಅಪ್ಪನ ಕಡೆ ಒಮ್ಮೆ ನೋಡಿ,
ಇವನಿದ್ದಾನಲ್ಲ..,ಬೈಯ್ತಾನಲ್ಲ..ಅನ್ನೋಹಾಗೆ ಅವನ ಕಡೆ ಕೈತೋರಿಸಿಕೊಂಡು ಮುಖ ಹುಳ್ಳಗೆ
ಮಾಡಿಕೊಂಡು "ಅಪ್ಪ ಆಯಿ..'ಎನ್ನುತ್ತಿದ್ದಾನೆ.ನಮಗಂತೂ ಅವನ ತಿಳುವಳಿಕೆಗೆ
ಅಚ್ಚರಿ,ನಗು ...!ಎರಡು ವರ್ಷದ ಮಗುವಿಗೆ ಅದನ್ನ ಆಡಬಾರದು ಎಂಬ ಅರಿವು,
ಆಸೆ, ಅದರೊಟ್ಟಿಗೆ ಭಯ. ,ಅದಕ್ಕೆ ಅವನ ಪ್ರತಿಕ್ರಿಯೆಗೆ ಇಂದಿನ ಪೀಳಿಗೆಯ ವೇಗದ
ಬಗ್ಗೆಯೇ ಹೆಮ್ಮೆಯೊಂದೆಡೆಯಾದರೆ,  ಅಚ್ಚರಿಯನ್ನು  ಹುಟ್ಟಿಸುತ್ತಿದೆ.ಇನ್ನು ಅಪ್ಪ ಅಮ್ಮ
ಏನಾದರು ರೇಗಿದರೆ ಇದ್ದಕ್ಕಿದ್ದಂತೆ ಶುರುಮಾಡ್ತಾನೆ ಹಾಡು ...ಅಪ್ಪ ಊಜಾ 
ಅಮ್ಮ ಊಜಾ (ಅಪ್ಪ ಲೂಜ ಅಮ್ಮ ಲೂಜ )ಅದಕ್ಕೆ ಹೇಳೋದು
" ಮಕ್ಕಳ ಆಟ ದೊಂಬರು ಆಡೋಲ್ಲ"ಅಂತ .

 ಹೀಗೆ ನನಗೂ ಅವನ ಜೊತೆ ಹೊರಗೆ ಹೋಗೋ ಆಸೆ.ಯಾಕೆಂದ್ರೆ ಅವನು
ಅಪ್ಪ ಅಮ್ಮನ್ನ ಬಿಟ್ಟು ಎಲ್ಲೂ ಬರೋಲ್ಲ ,ಮಾಮಿ ಎಂದರೆ ಖುಷಿಯಿಂದ ಬರ್ತಾನೆ.
ಹಾಗಂತ ಬಾಪ್ಪಾ ಮಾಮಿಗೆ ಹೋಗೋಣ ಅಂತ ಕರೆದರೆ,
" ಅಯ್ಯಿ.. ಮಾಮಿ.. ಚಯ್ಯಿ,ಎಂದು  ದೇವರ ಫೋಟೋ ತೋರಿಸಿ ಕೈ ಮುಗಿತಾ ಇದ್ದಾನೆ.
ದೇವರು ಇಲ್ಲೇ ಫೋಟೋದಲ್ಲೇ  ಇದ್ದಾನೆ,ಇಲ್ಲೇ ಕೈ ಮುಗಿಯೋಣ.ಎನ್ನುತ್ತಿದ್ದಾನೆ ಪೋರ.            

Oct 24, 2011



ನಮ್ಮ ತಪ್ಪಿಗೆ ಅನ್ಯರು  ಹೊಣೆಯೇ...??..!!!!!!!  
     
 "ಮಾತೂ ಆಡಿದರೆ ಹೋಯಿತು , ಮುತ್ತು  ಒಡೆದರೆ ಹೋಯಿತು" ಎಂಬ ಮಾತಿನಂತೆ
ನಾಲಿಗೆಯ ಪ್ರಾಮುಖ್ಯತೆ ವ್ಯಕ್ತಿತ್ವಕ್ಕೆ ಮೆರುಗು ಹಚ್ಚುವಂತಹದ್ದು.ಆದರೆ ಎಲ್ಲದಕ್ಕೂ 
ನಾಲಿಗೆಯೇ ಕಾರಣವಲ್ಲ ,ನಾಲಿಗೆ ಹೊರಳುವ ಮುನ್ನ ವಿವೇಚನೆಯದೇ  ಪ್ರಮುಖ ಪಾತ್ರ .  

      ದಾಸರ ವಾಣಿಯಲ್ಲೂ "ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ "                                                ಎಂದುನುಡಿದಿದ್ದಾರೆ.ಇನ್ನು ದಿನನಿತ್ಯದ ಮಾತಿನಲ್ಲಿ ಹೇಳುವುದಾದರೆ, ಈಗೊಂದು ಮಾತನಾಡಿ,                           
ಮರುಕ್ಷಣ ಅದನ್ನೇ ತಿರುಚಿ ಹೇಳುವರು.ಅಂತಹವರಿಗೆ "ಎರಡು ನಾಲಿಗೆ, ಎನ್ನುವರು.ಇನ್ನು ಕೆಲವರು
ಹಿಂದೆ ಮುಂದೆ ಯೋಚಿಸದೆ ಕೆಟ್ಟದಾಗಿ, ಕುಹಕ ಅಪಹಾಸ್ಯ ವ್ಯಂಗ್ಯವಾಡಿ ನೋವುಂಟು ಮಾಡುವರು.
ಅಂತಹವರಿಗೆ"ಅವರನಾಲಿಗೆ ಸರಿ ಇಲ್ಲಪ್ಪ"ಎಂದುಕೊಂಡು ಅವರೊಂದಿಗೆ ಹೆಚ್ಚು ಮಾತನಾಡಲೇ
 ಹಿಂಜರಿಕೆಯಾಗುವುದು . 

       "ಎತ್ತಿಗೆ ಜ್ವರ ಬಂದರೆ ,ಎಮ್ಮೆಗೆ ಬಾರೆ", ಎಂಬಂತೆ , ಮನಸಿನ ಸೂಚನೆಯ ಮೇರೆಗೆ ತನ್ಮೂಲಕ
ಹೊರಹಾಕಲ್ಪಡುವ  ನಾಲಿಗೆಯನ್ನುಧೂಶಿಸುವುದು ಎಷ್ಟುಸರಿ...?     "ಅಲಬಲ  ಪಾಪಿಯ    ತಲೆಯಮೇಲೆ ,"                                      
ಅನ್ನೋ ಹಾಗೆ. ಮನಸ್ಸಿನಲ್ಲಿ ನಡೆಯುವ ಮಂಥನವನ್ನು ಪ್ರಾಮಾಣಿಕವಾಗಿ ಚಾಚು ತಪ್ಪದೆ
ಆಡುವುದರ ಮೂಲಕ, ಮನಸಿನೊಂದಿಗೆ  ಸಹಕರಿಸುವುದು ತಪ್ಪು. ಎನ್ನುವುದಾದರೆ,
 "ಬಾಯೇ ಬಿಚ್ಚೋಲ್ಲ,
"ಮಾತನಾಡೋಲ್ಲ -ಮನೆ ವುಳಿಯೋಲ್ಲ" 
ಮಳ್ಳಿ ಹಾಗೆ ಮಾಡಿದ್ದೆ ಗೊತ್ತಾಗೊಲ್ಲ.
ಅವರೇನು ಮೂಕರೆ,..?
ನಾಲಿಗೆ ಬಿದ್ದು ಹೋಗಿದೆಯೇ,ಇರೋದನ್ನ ಹೇಳೋಕೇನು ಧಾಡಿ.ಹೀಗೆ.ಏನೆಲ್ಲಾ ವೃಥಾ ಅಪವಾದಗಳನ್ನು ,
ನಿಂಧನೆಯನ್ನು ಕೇಳಬೇಕಾಗುವುದು.ಇನ್ನು ಹೇಗಪ್ಪ ಇವರ ನಡುವೆ ಏಗೋದು.
ಎಂದು ತೊಳಲಾಡುವ  ಪರಿಸ್ಥಿತಿ ನಾಲಿಗೆಯದು.
ಅದೂ ಸರಿಯಲ್ಲವೇ..?ಮನಸ್ಸಿನಂತೆ ಮಾತು ಸಹ . .ಮನಸಿನ ಮಾತನ್ನು ಶಿರಸಾವಹಿಸಿ
ಪಾಲಿಸುವುದಷ್ಟೇ ನಾಲಿಗೆಯ ಕಾಯಕ.  ಇದರಲ್ಲಿ ನಾಲಿಗೆಯದೇನು ತಪ್ಪಿದೆ ..?
               
    ಅದರದೇ ಆದಂತಹ ಜವಾಬ್ಧಾರಿಯುತವಾದ ಕಾಯಕವೆಂದರೆ ಮೂಗಿನಿಂದ
ಆಘ್ರಾಣಿಸಿದ್ದನ್ನು ,ಕಣ್ಣಿನಿಂದ ಆಕರ್ಷಿಸಿದ್ದನ್ನು ಆಸ್ವಾದಿಸಿ ರುಚಿಯ ಅನುಭವವನ್ನು
ಅರುಹುವುದು.ಅದನ್ನು ನಿರ್ವಂಚನೆಯಿಂದ ನಿರ್ವಹಿಸುತ್ತಿದೆಯಲ್ಲ.
    ಪಾಪ, ದೇಹವೇನಾದರು ಸಕ್ಕರೆ ಕಾರ್ಖಾನೆಯಾಗಿದ್ದಾರೆ ಸಿಹಿಯನ್ನು ಸವಿಯುವ ಆಸೆಯನ್ನು
ಸಹಿಸಿಕೊಂಡು,  ಸುಮ್ಮನಿರುವುದು ಅದೆಷ್ಟು ಕಷ್ಟ ಎಂಬುದು ಅದಕ್ಕೆ ಗೊತ್ತು.ಹಾಗೆಯೇ ರಕ್ತ 
ಪಿಪಾಸಿಯಾಗಿದ್ದರೆ ಉಪ್ಪಿಲ್ಲದ ಊಟವನ್ನು ಸಹಿಸುವ ಗ್ರಹಚಾರ.ಹಾಗೊಂದು ಪಕ್ಷ  ದೇಹದ
ಪರಿಸ್ಥಿತಿಯನ್ನು ,ಮನಸಿನ ಸಂದೇಶವನ್ನು ಕಡೆಗಣಿಸಿ ರುಚಿಯಾಗಿದೆಯೆಂದು ಕಣ್ಣಿಗೆ ಕಂಡಿದ್ದನ್ನು
ತಿಂದಿದ್ದೆಯಾದರೆ , ಖಾಯಿಲೆ ಉಲ್ಬಣಿಸಿದಾಗ" ಹಯ್ಯೋ ಈ ಹಾಳೂನಾಲಿಗೆ ಚಪಲ ನೋಡಿ,
ಹೀಗಾಯಿತು. ಅಂತ ಆಗಲೂ ನಾಲಿಗೆಗೆ ಬೈಗುಳ ತಪ್ಪಿದ್ದಲ್ಲ.ಅಂತಹಾ ಸಂಧರ್ಭದಲ್ಲಿ ಕಹಿಯನ್ನು
ಪ್ರೀತಿಯಿಂದಲೇ ಆಸ್ವಾದಿಸಿ ಆರೋಗ್ಯವನ್ನು ಕಾಪಾಡುವುದು.

         ಇನ್ನು ಭಾಷೆಯ ವಿಷಯ ಬಂದಾಗ  ನಾಲಿಗೆಯ ಪಾತ್ರ ಬಹಳ   ಮುಖ್ಯವಾದದ್ದು.
"ನಾಲಿಗೆ ಕುಲ ಹೇಳುತ್ತೆ" "ಎನ್ನುತ್ತಾರೆ .  ಆದರೆ ಪರಿಸರಕ್ಕೆ ತಕ್ಕಂತೆ ಭಾಷೆಯೂ ಸಹ.
ಪರಿಸರ, ಪರಿಸ್ಥಿತಿ, ಪ್ರತಿಕೂಲವಾಗಿದ್ದಲ್ಲಿ  ಜಾತಿ ಕುಲ ಧರ್ಮ ವಿಧ್ಯೆ  ಎಲ್ಲವನ್ನು ಮರೆಸಿ ,
ಮೀರಿಸುವಂತಹ ಭಾಷೆಯನ್ನೂ ಹೊರಹೊಮ್ಮಿಸುವುದೇ ಈ ನಾಲಿಗೆಯ ವೈಶಿಷ್ಟ್ಯತೆ.
ಆದರೆ ಕೆಲವು ಉತ್ತಮ ಕುಲಜರೆ ಅವಾಚ್ಯ ಶಬ್ದ ಗಳನ್ನೂ ಸುಲಲಿತವಾಗಿ ಬಳಸಿ ಕೀಳಾಗಿ
ಮಾತನಾಡುವುದರ ಮೂಲಕ ಅವರ ಜನ್ಮಜಾತಿಯ ಬಗ್ಗೆಯೇ ಅನುಮಾನಿಸುವಂತೆ
ಮಾತನಾಡುತ್ತಾ ನಾಲಿಗೆಗೆ ಕಳಂಕ ಹಚ್ಚುತ್ತಾರೆ.ಇನ್ನು ಕೆಲವರು  ವ್ವಕ್ಚಾತುರ್ಯದಿಂದಲೇ  
ತಮ್ಮಉತ್ತಮ  ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾರೆ  
  
        ಕೆಲವರ  ಭಾಷೆಯಿಂದಲೇ ಇವರು  ಸಾಹಿತಿಗಳೋ ಸಂಗೀತಗಾರರೋ,ವಿಜ್ಞಾನಿಗಳೋ  ,                                     ಸಾಧು ಸಂತರೋ,ಗ್ರಾಮೀಣ ಪರಿಸರದಿಂದ ಬಂದವರೋ,ನಗರದ ಪರಿಸರದಿಂದ ಬಂದವರೋ,
ವಿಧ್ಯಾವಂತರೋ,ಅವಿಧ್ಯಾವಂತರೋ ,ಎಂಬುದು ವ್ಯಕ್ತವಾಗುತ್ತದೆ.ಇನ್ನು ಕೆಲವರದು ,ಇಬ್ಬಗೆಯ
ಮನಸ್ಥಿತಿ. ಮನಸ್ಸಿನಲ್ಲಿದ್ದಂತೆ ಮಾತೂ ಹೊರಹೊಮ್ಮಿದರೆ ಅವರ ವ್ಯಕ್ತಿತ್ವಕ್ಕೆ
ಕುಂದಾದಿತು. ಎಂಬುದನ್ನು ಅರಿತು ಅವರ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ಮಾತನಾಡಲು
ಈ ನಾಲಿಗೆಯನ್ನು ಉಪಯೋಗಿಸಿಕೊಳ್ಳುತ್ತಾರೆ.ಇದರಲ್ಲಿ ನಾಲಿಗೆಯ ತಪ್ಪೇನಿದೆ. 
ಕೆಲವರಿಗೆ ತಮ್ಮ ತಪ್ಪನ್ನುಇನ್ನೊಬ್ಬರ ಮೇಲೆ ಹೊರಿಸಿ ತಾವು ಶಿಷ್ಟ ಸಭ್ಯರೆನ್ನಿಸಿ
ಕೊಳ್ಳುವುದು ಹುಟ್ಟುಗುಣ.ಅಂತೆಯೇ ಮನಸ್ಸಿನ ತಪ್ಪನ್ನು ನಾಲಿಗೆಯ ಮೇಲೆ
ಹೊರಿಸುವುದು  ಬಿಟ್ಟು, ವಿವೇಚನೆಯನ್ನು ಮನಸಿಗೆ ತಿಳಿಹೇಳುವುದು ಯೋಗ್ಯವಲ್ಲವೆ.

ಮಾತಿನಿಂ ನಗೆ ನುಡಿಯು
ಮಾತಿನಿಂ ಹಗೆ ಹೊಲೇಯು
ಮಾತಿನಿಂ ಸರ್ವಸಂಪದವು ಲೋಕಕ್ಕೆ
ಮಾತೆ ಮಾಣಿಕವು  ಸರ್ವಜ್ಞ,
ಸರ್ವಜ್ಞನ ವಚನದಂತೆ ವಿವೇಚನೆಯ ನುಡಿ ಆರೋಗ್ಯಕರ

ಆರಯ್ದು ನಡೆವನು
ಆರಯ್ದು ನುಡಿವವನು
ಆರಯ್ದು ಅಡಿಯನಿಡುವವನು
ಲೋಕಕ್ಕೆ ಆರಾಧ್ಯನಕ್ಕು ಸರ್ವಜ್ಞ  

ಅರಿತು ಆಡುವವರು ಆರಾಧಕರಾಗುವರು.ಅದು ಬಿಟ್ಟು ಅನಿಸಿದ್ದೇ ಆಡುವುದು ,
ಅನಿಸಿಕೆ ವ್ಯಕ್ತ ಪಡಿಸಲು ಸಹಕರಿಸಿದ ನಾಲಿಗೆಯನ್ನು ಧೂಶಿಸುವುದು ಸಮಂಜಸವೇ ...?

ಲೋಕದಾ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ಮಾನವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವಾ ಸಂತೈಸಿಕೊಳ್ಳಿ ,

ಎನುವ ಬಸವಣ್ಣನವರ  ವಚನದಂತೆ ಎಲುಬಿಲ್ಲದ ನಾಲಿಗೆ ನಾವು
ಹೊರಳಿಸಿದಂತೆ ಹೊರಳುವುದು.ಅಂತಹ ನಿಯತ್ತಿನ ನಾಲಿಗೆಯನ್ನು
ಅಪವಾದಕ್ಕೆ ಗುರಿಮಾಡುವುದು ತರವೇ  ....???????? ನೀವೇ ಹೇಳಿ..?
ವಿವೇಚನೆಗೆ ಬೆಳಕನ್ನು ನೀಡುವ ಮೂಲಕ ನಾಲಿಗೆಯನ್ನು ಅಪವಾದದಿಂದ
ಪಾರು ಮಾಡೋಣವೆ..???  
ಕತ್ತಲಿಂದ ಬೆಳಕಿನೆಡೆ ನಡೆಸುವ ಬೆಳಕಿನ ಹಬ್ಬ ,
ಹಬ್ಬಗಳ ರಾಜ
*** ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು****                      

Oct 5, 2011

ಸರ್ವರಿಗೂ ವಿಜಯದಶಮಿಯ ಶುಭಾಶಯಗಳು


















ಆಶ್ವಯುಜಮಾಸ ಶುದ್ಧ ಪಾಡ್ಯಮಿಯಿಂದ ನವಮಿಯವರೆಗೆ ಒಂಭತ್ತು ರಾತ್ರಿಗಳನ್ನು
 ನವರಾತ್ರಿ ಎಂದು ಪ್ರತಿದಿನವೂ ಒಂದೊಂದು ರೂಪವನ್ನು ಪೂಜಿಸುವರು .ಪ್ರತಿ
ವ್ಯಕ್ತಿಯಲ್ಲಿ ಸುಪ್ತವಾಗಿರುವ ಇಚ್ಚಾಶಕ್ತಿ ,ಕ್ರಿಯಾಶಕ್ತಿ ,ಜ್ಞಾನ ಶಕ್ತಿಗಳ ಸ್ವರೂಪವೇ
ದೇವಿಯ ವಿವಿಧ ರೂಪಗಳು. ನವಶಕ್ತಿಗಳಿಂದ ಪೂರಿತಳಾಗಿ, ಪ್ರೇರಿತಳಾಗಿ
ದಶಮಿಯಂದು ದಾನವರನ್ನು ದಮನಮಾಡಿ ವಿಜಯಶಾಲಿಯಾದ ವಿಜಯಲಕ್ಷ್ಮಿ
ಯನ್ನು ನವದುರ್ಗೆಯ ರೂಪದಲ್ಲಿ  ಆರಾಧಿಸುವ ಮಹಾದಿನ.  
ನವಶಕ್ತಿಯ  ನವವಿಧದ  ಭಕ್ತಿಯು ನವಯೋಗಭರಿತಳಾಗಿ  ನವಮಾಸ ಹೊತ್ತು
ನೋವಿಗೂ ನವಶಕ್ತಿ ತುಂಬಿ ನವಚೈತನ್ಯಹರಿಸಿ
 ಹೊಸ ಜೀವಕೆ ಹೊಸ ಬೆಳಕನ್ನು ಹೊಮ್ಮಿಸುವ  ಹೆಣ್ಣು ಅಷ್ಟಭುಜಾದೇವಿ
ಶ್ರೀ ಚಾಮುಂಡೇಶ್ವರಿಯ ಪ್ರತಿರೂಪ ಎಂಬುದನ್ನು ಪ್ರತಿಬಿಂಬಿಸುವುದು 
ಈ ನವಮಿಯ ಸಂಕೇತದ ಸಂಧರ್ಭ.
ದುಷ್ಟ ಪ್ರವೃತ್ತಿಗಳ ಮೇಲೆ ವಿಜಯ ಸಾಧಿಸಿ,ಮನುಷ್ಯತ್ವದ ಸೀಮೆಯನ್ನು ಉಲ್ಲಂಘಿಸಿ
ದೈವತ್ವದಲ್ಲಿ ವಿಜೃಂಭಿಸುವುದೇ ನಿಜವಾದ ಸೀಮೋಲ್ಲಂಘನ,ಸಕಲ ದೇವಾದಿ
ದೇವತೆಗಳು ತಮ್ಮೆಲ್ಲ  ಅಮೂಲ್ಯ ಶಕ್ತಿಯನ್ನು,ಆಯುಧಗಳನ್ನು ಧಾರೆಯೆರೆದಾಗ
ಇವುಗಳ ಸಂಘಟಿತ ಸ್ವರೂಪದಿಂದ  ದೈತ್ಯಶಕ್ತಿಯನ್ನು ದಮನಗೊಳಿಸಿದ ಮಹಾದಿನ .....
ಈ ಮೂಲಕ ಸಂಘಟನೆಯಲ್ಲಿನ ಶಕ್ತಿಯ ಸಾಮರ್ಥ್ಯವನ್ನು ಸಾರುವುದಾಗಿದೆ.
                     

ಶಿಕ್ಷಿಸುವಾಗ ದುರ್ಗೆಯಾಗಿ ,ಉಣಿಸುವಾಗ ಅನ್ನಪೂರ್ಣೆಯಾಗಿ ಆರ್ಥಿಕತೆಯನ್ನು
ಪೂರೈಸುವಾಗ ಶ್ರೀಲಕ್ಷ್ಮಿಯಾಗಿ , ಕಲಿಸುವಾಗ ವಿಧ್ಯಾದೇವತೆಯಾಗಿ ,ಸಂತಾನ
ಲಕ್ಷ್ಮಿಯಾಗಿ ವಂಶವನ್ನು ಬೆಳೆಸುವಳು.ಹೀಗೆ ವ್ಯಕ್ತಿ ನಿರ್ಮಾಣದಲ್ಲಿ ಹೆಣ್ಣು ತನ್ನ
ಪಾತ್ರವನ್ನು ದೇವಿಯ ರೂಪದಲ್ಲಿ ನಿರ್ವಂಚನೆಯಿಂದ,ನಿಸ್ವಾರ್ಥಿಯಾಗಿ ನಿರ್ವಹಿಸುವಳು.  
ಅಂತಹಾ ಲಕ್ಷಣಗಳನ್ನು ಪ್ರತಿಪಾದಿಸಲ್ಪಡುವ ಅಷ್ಟಭುಜಾದೇವಿಯ ರೂಪವು
ವಿಶೇಷತೆಯಿಂದ ಕೂಡಿರುವುದಾಗಿದೆ.

ಒಂದು ಕೈಯಲ್ಲಿ ಭಗವದ್ಗೀತೆ : ಜ್ಞಾನದ ಸಂಕೇತ ,ವೇದ ವೇದಗಳಸಾರ,ಜ್ಞಾನಭಂಡಾರ
ಈ ಭಗವದ್ಗೀತೆ

ಕಮಲ :ಕಮಲ ಕೆಸರಿನಲ್ಲಿ ಹುಟ್ಟಿದರು ತನ್ನ ಪಾವಿತ್ರತೆಯನ್ನು ಕಾಯ್ದುಕೊಂಡಿದೆ.
ಸೂರ್ಯೋದಯಕ್ಕೆಅರಳಿದ ಕಮಲದಲ್ಲಿ ಕುಳಿತ ದುಂಬಿಯು ಕಮಲದ ಕೋಮಲತೆಗೆ
ಮೈಮರೆತು  ಹಾಗೆಯೇ  ನಿದ್ರಿಸಿರುತ್ತದೆ.ಸಂಜೆಯಾಗುತ್ತಿದ್ದಂತೆ ಕಮಲದ ದಳಗಳು
ಮುಚ್ಚಿ ಬಾಡುವುದಾದರು,ದುಂಬಿ ತನ್ನ ಕೊರೆಯುವ ಸ್ವಭಾವವನ್ನು ಮರೆತು ಒಳಗೇ
ನಿದ್ರಿಸುವುದು.ಕಮಲ ಅರಳಿದಾಗ ತಣ್ಣನೆ ಹೊರ ಬರುವುದು.ಕಮಲದ
ಕೋಮಲತೆಯಿಂದ ತನ್ನ ಪಾವಿತ್ರ್ಯತೆಯನ್ನುಮೆರೆದು ,ಕಾಪಾಡಿ ಕೊಳ್ಳುವುದಲ್ಲದೆ,
ದುಂಬಿಯ ಕ್ರೂರತೆಯನ್ನುಮರೆಸುವುದು. "ಸಜ್ಜನರ ಸಂಗ ಹೆಜ್ಜೇನು ಸವಿದಂತೆ"
ಎಂಬ ಸರ್ವಜ್ಞನ ವಚನವನ್ನು ಪ್ರತಿಪಾದಿಸುವುದು.

ತ್ರಿಶೂಲ: ಇದು ದುಷ್ಟ ಶಿಕ್ಷಣ  ,ಶಿಷ್ಟ ರಕ್ಷಣೆಯ ಸಂಕೇತವಾಗಿದೆ.
ತ್ರಿಶೂಲದೊಂದಿಗೆ ಕೆಂಪು-ಹಳದಿ ಬಣ್ಣದ  ಧ್ವಜವಿರುವುದರ ಸಂಕೇತ
ತ್ಯಾಗದ ದ್ಯೋತಕ ವಾಗಿದೆ.
ಕೆಂಪು: ತ್ಯಾಗ ,ಬಲಿದಾನದ ಪ್ರತಿಕವಾದರೆ,
ಹಳದಿಯವರ್ಣ:-ಸುವರ್ಣ ಸಮೃದ್ಧಿ ವೈಭವವನ್ನು ಸಾರುವುದಾಗಿದೆ.

ಅಗ್ನಿಕುಂಡ :ದುರ್ಗುಣಗಳನ್ನು ಅಗ್ನಿಗೆ ಹವಿಸ್ಸಾಗಿ ಅರ್ಪಣೆ ಮಾಡುವುದಾಗಿದೆ.
ಜಪಮಾಲೆ :ನಿರಂತರತೆ,ಏಕಾಗ್ರತೆಯನ್ನು ಸಾರುವುದಾಗಿದೆ.
ಘಂಟೆ :ಸದಾ ನಮ್ಮನ್ನು ಎಚ್ಚರದಿಂದಿರಿಸಿ,ನಮ್ಮ ಮನದ ದೈವತ್ವವನ್ನು ,
ಸಾಮಾಜಿಕ ಭಾವನೆಗಳನ್ನು ಜಾಗೃತಿ ಗೊಳಿಸುವುದಾಗಿದೆ.
ಖಡ್ಗ:ಶೌರ್ಯದ,ಧೈರ್ಯದ,ಸ್ಥೈರ್ಯದ  ಸಂಕೇತವಾಗಿದೆ.
ಅಭಯ ಹಸ್ತ:ನಾವು ಮಾಡುವ ಸಕಲ ಸತ್ಕಾರ್ಯಗಳಿಗು ವರದ ಹಸ್ತ ದಿಂದ ಆಶಿರ್ವದಿಸುವುದಾಗಿದೆ.
ಶ್ರಿಚಕ್ರಧಾರಿಣಿ:ಆತ್ಮ ಸಾಕ್ಷಾತ್ಕಾರ ಮಾಡಿ ಕೊಡುವ ಸಲುವಾಗಿ  ದೇವಿಶ್ರೀಲಲಿತೆಯು
ಶ್ರೀಚಕ್ರದ ಮಧ್ಯ ಬಿಂದುವಿನಲ್ಲಿ ಸ್ಥಿತಳಾಗಿರುವಳು ಎಂದು ಹೇಳಲಾಗುವುದು.ಸ್ತ್ರೀ ಸಾಮರ್ಥ್ಯದ
ಅರಿವನ್ನು ದೇವಿಯ ಮಹಿಮೆಯಿಂದ ಬಿಂಬಿಸಲಾಗುವುದು.
ಈ ಕುರಿತು ಪುರಾಣದಲ್ಲಿ ಹೀಗೆ ಹೇಳಿದೆ..ಒಮ್ಮೆ ದೇವತೆಗಳು ಯಜ್ನವನ್ನುಮಾಡುತ್ತಿರುವಾಗ
ಆ ಯಜ್ಞಕುಂಡದಿಂದ ಕಣ್ಣು ಕೋರೈಸುವ ಪ್ರಕಾಶಮಾನವಾದ ಚಕ್ರವೊಂದು ಪ್ರತ್ಯಕ್ಷವಾಯಿತು.
ಎಲ್ಲರು ಅದರತ್ತಲೇ ಅಚ್ಚರಿಯಿಂದ ನೋಡುತ್ತಲಿರುವಾಗಲೇ ಆ ಚಕ್ರದ ಮಧ್ಯ ಬಿಂದುವಿನಿಂದ
ದಿವ್ಯ ತೇಜಲಾದ ದೇವಿ ಪ್ರಕಟವಾಗಿ ದೇವತೆಗಳ ಶೌರ್ಯಕ್ಕೆ ಸವಾಲಾಗಿದ್ದ ಶೋಣಿತಪುರದ
ಅರಸ ಭಂಡ ಸುರ ಎಂಬ ರಾಕ್ಷಸನನ್ನು ವಧಿಸುತ್ತಾಳೆ,ಮತ್ತು ಬಾಲ ಭಂದಾಸುರನ ಮಕ್ಕಳನ್ನು
ವಧಿಸುತ್ತಾಳೆ.ಇಂತಹ ದುಷ್ಟ ಶಿಕ್ಷಕಿ,ಶಿಷ್ಟ ರಕ್ಷಕಿಯಾದ ದೇವಿಯನ್ನು ಸೌಮ್ಯ ರೂಪಗಳಲ್ಲಿ,
ಶ್ರೀಚಕ್ರವನ್ನು ಪೂಜಿಸಲಾಗುವುದು.     
  ಪಾಂಡವರು ಅಜ್ಞಾತವಾಸ ಮುಗಿಸಿ ಶಮೀವೃಕ್ಷದಲ್ಲಿ ಇಟ್ಟಿದ್ದ ಶಸ್ತ್ರಾಸ್ತ್ರಗಳನ್ನೂಕೆಳಗಿಳಿಸಿ
ಶಮೀವೃಕ್ಷವನ್ನು ಪೂಜಿಸಿ "ಶಮೀಶಮಯತೇ ಪಾಪಂ ,ಶಮೀ ಶತ್ರು ವಿನಾಶನಂ,
ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಿಯದರ್ಶಿನಿ "ಎಂಬ ಶ್ಲೋಕವನ್ನು ಹೇಳುತ್ತಾ
ಶಮಿಯ ಧಾರಣೆ ಮಾಡುವ ದಿನವಾಗಿದೆಯಲ್ಲದೆ, ರಾಮ ರಾವಣ ,ಕುಂಭಕರ್ಣ,
ಮೇಘನಾದರನ್ನು ಸಂಹಾರ ಮಾಡಿದ ಮಹಾದಿನವಾಗಿದೆ

ಹೀಗೆ ರಾಜರಾಜೇಶ್ವರಿಯು ಮಾರ್ಗದರ್ಶಕಳಾಗಿ ಸರ್ವರಿಗೂ ಸದ್ಬುದ್ಧಿಯನ್ನು ಕರುಣಿಸಿ
ಸನ್ಮಾರ್ಗದಲ್ಲಿ ನಡೆಸುವ  ವಿಧ್ಯಾದಾಯಿನಿ ,ಶೂಲಧಾರಿಣಿ,ವಿಶ್ವಕಾರಿಣಿ,ಕಮಲಕೊಮಲೆ
ಗರ್ಭಗೌರಿ,ಸೌಮ್ಯನಾಯಕಿ ,ತ್ರಿಪುರಸುಂದರಿ ,ಕ್ಷೀರ ಸಮುದ್ರ ರಾಜತನಯೇ ,
ಶ್ರಿಚಕ್ರಧಾರಿಣಿ ವಿಜಯಶಾಲಿನಿ,ಭಾರತಭವಾನಿಗೆ ನಮನವಿದೋ ನಮನ.

ದುಷ್ಟ ಪ್ರವೃತ್ತಿಗಳ ಮೇಲೆ ವಿಜಯ ಸಾಧಿಸಿ,ಮನುಷ್ಯತ್ವದ ಸೀಮೆಯನ್ನು ಉಲ್ಲಂಘಿಸಿ
ದೈವತ್ವದಲ್ಲಿ ವಿಜೃಂಭಿಸುವುದೇ ನಿಜವಾದ ಸೀಮೋಲ್ಲಂಘನ, ವಿಜಯದಶಮಿಯಂದು
ಮಹಿಷಾಸುರನನ್ನು ವಧಿಸಿ ಮಹಿಷಾಸುರ ಮರ್ಧಿನಿಯಾಗಿ ಬಿಜಯಿಸಿದಳು                      

ಒಟ್ಟಾರೆ ದಾನವ ಶಕ್ತಿ ಎಷ್ಟೇ ಪ್ರಭಲವಾಗಿದ್ದರೂ... 
ಸಮಾನ ಉದ್ದೇಶ,ಧ್ಯೇಯಗಳೊಂದಿಗೆ ಸಂಘಟಿತರಾದಾಗ  ನಿರ್ಭಯವಾಗಿ
ಎದುರಿಸಬಹುದುಎಂಬ ಸಂದೇಶವನ್ನು ಸಾರುವ ವಿಜಯದಶಮಿಯ ಆಚರಣೆ
ಸರ್ವರಿಗೂ ಸ್ಪೂರ್ತಿದಾಯಕ ಹಾಗೂ ಮಾರ್ಗದರ್ಶಕವಾಗಿದೆ.  


Sep 24, 2011



birthday-flowers.gif


   ಪ್ರೀತಿಯಾ  ಮಾನಸಾರಘುಪ್ರಸಾದ್ ಗೆ ,ಹುಟ್ಟು   ಹಬ್ಬದ ಹಾರ್ದಿಕ ಶುಭಾಶಯಗಳು                                                
 
many many happy returns of the day,
ನೋವನ್ನು ಮರೆಸುವ  ,
 
TW313.jpg ಮನಸನ್ನು ನಗಿಸುವ
 
ಸ್ನೇಹವನ್ನು ಕಾಪಾಡುವ
 
ಜೀವನವನ್ನು ಸಾಗಿಸುವ
 
ಜೀವನವೇ'ನಗು,
ಈ... ನಗು
 
ನಿಮ್ಮ ಬಾಳಿನಲ್ಲಿ


 ಸದಾ ನಲಿಯುತಿರಲಿ
ಎಂದು ಹಾರೈಸುವ ನಿನ್ನ ಗೆಳತಿ,ಅಮ್ಮನ... 
ಹುಟ್ಟು ಹಬ್ಬದ ಹಾರ್ದಿಕ  ಶುಭ ಹಾರೈಕೆಗಳು. 
th_birthday-flowers-6188.gif

Sep 19, 2011

ಬದ್ಧನಾದ

ಹುಟ್ಟು ಸಾವಿನ
ತಿರುಗಣಿಯ
ಮೆಟ್ಟಿನಿಂತು
ಮುವ್ವತ್ತರ ಹರೆಯದಲಿ
ಹನ್ನೆರಡು ವರುಷಗಳ
ತಪದಲಿ  
ಕೇವಲ ಜ್ಞಾನದಿಂ
ವೀತರಾಗನೆನಿಸಿ,

ಭುವಿಗೆ ಬಿಳುತ್ತಿದ್ದಂತೆ
ಪುರಜನ,ಗುರುಜನರ
ಸುಖಶಾಂತಿ ವೃದ್ದಿಸಲು 
ವರ್ಧಮಾನನೆನಿಸಿ,

ಬಾಲ್ಯದಲೇ ಸರ್ಪವನ್ನು
ಮೆಟ್ಟಿ ನಿಲಲು
ಮಹಾವೀರನೆನಿಸಿ,

ಅರಿವಿನ ಅರಿವಿಗೆ
ಗುರುವಾಗಿ  
ಸನ್ಮತಿ ಎನಿಸಿ,

ಅರಿಷಡ್ವರ್ಗಗಳ
ಜೈಸಿ ಜಿನನಾಗಿ, 
ಲೋಕದ
ಸಮನ್ವಯಕೆ
ಬದ್ಧನಾದ  ಬುದ್ಧನಾದೆ.
***********

Sep 5, 2011

    ಆತ್ಮೀಯರಿಗೆಲ್ಲಾ ಡಾ.ರಾಧಕೃಷ್ಣನ್ ರವರ ಜನ್ಮದಿನದ ನೆನಪಿಗಾಗಿ  ಆಚರಿಸುತ್ತಿರುವ  ಶಿಕ್ಷಕರ ದಿನಾಚರಣೆಯ ಶುಭಾಶಯಗಳು. 
           ಕಾಕತಾಳಿಯವೆಂಬಂತೆ ಕಳೆದ ವರ್ಷ ಅಮೇರಿಕಾದಲ್ಲಿದ್ದ ಈ
ಸಂದರ್ಭದಲ್ಲಿ ಈ ದಿನದ ವಿಶೇಷತೆ ನೆನಪಿಗೆ ಬಾರದಿದ್ದರೂ ಆಕಸ್ಮಿಕವಾಗಿ 
ನನ್ನ ಬ್ಲಾಗ್ ಜನನವಾದದ್ದು ಈ ದಿನವೆಂದು ಅರಿವಿಗೆ ಬಂದಾಗ ನನ್ನ ನೆನಪಿಗೆ ಬರದಿದ್ದರು ನನ್ನಚಟುವಟಿಕೆ, ನನ್ನೊಳಗಿನ ಶಿಕ್ಷಕಿಗೆ ಎಚ್ಚರಿಸಿತ್ತು. 
ಬದುಕಿನಲ್ಲಿ ಬಂದು ಹೋಗುವ ಪ್ರತಿಯೊಬ್ಬರಿಂದಲೂ ಒಂದೊಂದು ರೀತಿಯ ಶಿಕ್ಷಣ ನಮಗೆ ಲಭ್ಯವಾಗುತ್ತಿರುತ್ತದೆ.ಹಾಗಾಗಿ ನನ್ನ ಪಯಣದಲ್ಲಿ ಬಂದು
ಹೋಗಿರುವ,ಮುಂದೆ ಬರುವ ಒಬ್ಬೊಬ್ಬರು ಗುರುವೇ ಎಂದು ನನ್ನ ಭಾವನೆ.  


ಭಾವದ ಒಡಲು...ಕಾವ್ಯದ ಕಡಲು
****************


ಕಾವ್ಯವೇ ಅಗಾಧ ನಿನ್ನ ಜ್ಞಾನದ ಕಡಲು
ನಮಗೆ ಸಾಧ್ಯವೇ ಅದರ ಒಡಲನಳೆಯಲು ....!!!!!!
ಒಡಲನಳೆಯಲು.

ಜಲದ ಮೇಲೆ ಬಿದ್ದ ಹನಿಯು
ಪುಷ್ಪವಾಗಿ ಅರಳಿದಂತೆ
ಹೊಳೆಯ ಮೇಲೆ ಬಿದ್ದ ಮಳೆಯ
ಹನಿಗಳರಳಿದಂತೆ

ಎದೆಯ ಒಳಗೆ ಎದ್ದ ಭಾವ
ನೋವ ನಲಿವ ನುಂಡ ಜೀವ
ಭಾವದೊಲವ ಕಾವಿನಲ್ಲಿ ಹಡೆದ ಶಿಶುಗಳು.
ಅನುಭವದ ದರ್ಪಣವೇ ಆಟಿಕೆಗಳು .

ಭಾವ ಹೃದಯ ಸಂವಾದ
ಅನುಭಾವ ಗೀತ ಸ್ಪಂದ
ಅಕ್ಷರಕ್ಷರದಲಿ ಬೆಸೆವ ಭಾಷೆ ಭಾವಕೆ

ಮಣ್ಣ ಸಾಕ್ಷಿ ಹುಲ್ಲು ಗರಿಕೆ
ಬದುಕ ಸಾಕ್ಷಿ ಭಾವ ಸನಿಕೆ
ಭಾವದೊಲುಮೆಯೊಡನೆ
ತುಡಿವ ಮುಗ್ಧ ಮಕ್ಕಳು..ಮುಗ್ಧ ಮಕ್ಕಳು

ಮೊಗ್ಗಿನಲ್ಲಿ ಮುಗ್ಧವಾಗಿ
ಅರೆಬಿರಿಯೇ ಪ್ರೌಢವಾಗಿ
ಅರಳುತಾ ಪ್ರಬುದ್ಧವಾಗಿ
ಮನದ ಬನದಲಿ

ಹೃದಯದಲ್ಲಿ ಬೆಚ್ಚನೆ
ಕುಳಿತ ಸವಿನೆನಪುಗಳು
ಕಾವು ಪಡೆದು ಮೊಟ್ಟೆಯೊಡೆದು
ರೆಕ್ಕೆ ತೆರೆದು ಹಾರುತಿವೆ
ಎದೆಯಿಂದ ಎದೆಗೆ .... ಎದೆಯಿಂದ ಎದೆಗೆ

ವರುಷದಾ ಹರುಷದಲ್ಲಿ
ಹವಳ ಮುತ್ತು ಹೆಕ್ಕಲಿಕ್ಕೆ
ಹರಸಿರೆಂದು ಹಾಡುತಿದೆ ಭಾವ ಜೀವವೂ...
ಭಾವ ಜೀವವೂ........

ಕಾವ್ಯವೇ..ಅಗಾಧ.....ನಿನ್ನ ಜ್ಞಾನದ ಕಡಲು ....

***********************

Aug 30, 2011

ಎಲ್ಲರಿಗೂ ಗೌರಿಹಬ್ಬದ  ಗಣೇಶ ಚತುರ್ಥಿಯ ಹಾರ್ದಿಕ  ಶುಭಾಶಯಗಳು
*****************


ಸಾರ್ಥಕತೆ
***********


ಗಂಧವೀವೆ ಗಾಳಿಗೆ

ಚಂದವೀವೆ ಕಣ್ಣಿಗೆ

ಜೇನಿಗೀವೆ ಮಧುವನು

ಚಿಟ್ಟೆಗೀವೆ ಮತ್ತನು


ತಾವು ಕೊಟ್ಟು ಇಬ್ಬನಿಗೆ

ಗಾಳಿಯೊಡನೆ ಲಾಸ್ಯವಾಡಿ

ಅಂದದಲ್ಲೇ ಆಕರ್ಶಿಸಿ

ರವಿಗೆ ನಗೆಯ ಬಿರುವೆ .


ಕೀಟಗಳ ಹಸಿವು  ನೀಗಿ  

ಕೀಟಲೆಗೂ ಮೈಯ್ಯೊಡ್ಡಿ

ಹೆಣ್ಣ ಮುಡಿಯಲಿ ನಲಿಯುತ 

ದೇವನಡಿಯಲಿ ನಗುತಲೇ..


ಬಳಲಿ ಬಾಡಿ  ತ್ಯಾಗಿಯಾಗಿ

ಬಾಗಿ  ಮುಕ್ತಿ ಹೊಂದುವೆ

ಸಾರ್ಥಕತೆಯ ಪಡೆಯುವೆ

ನಗುತಲೆ ನೀ ಬದುಕುವೆ  

****************  

Aug 12, 2011

                ಶ್ರಾವಣಮಾಸ ಹಿಂದೂಗಳಿಗೆ ಬಹಳ ಪವಿತ್ರವಾದಮಾಸ .ನಾಗರಪಂಚಮಿ ,ವರಮಹಾಲಕ್ಷ್ಮಿ ,ಗೋಕುಲಾಷ್ಟಮಿ,
ಉಪಾಕರ್ಮ. ಹೀಗೆ ಹಬ್ಬಗಳು ಸಾಲುಸಾಲಾಗಿ  ಬರುತ್ತವೆ .
ಹಾಗೆ ಶ್ರಾವಣ ಪೌರ್ಣಮಿಯಂದು ರಕ್ಷಾಬಂಧನವನ್ನುಭಕ್ತಿ, ಶ್ರದ್ಧೆ,
ಸಂಭ್ರಮಗಳಿಂದ ಆಚರಿಸುತ್ತೇವೆ.ಅಮರನಾಥದಲ್ಲಿ ಶಿವಲಿಂಗದರ್ಷನವಾಗುವುದು
ಈ ಸಮಯದಲ್ಲೇ ಎಂದು ಹೇಳಲಾಗುವುದು.ರಕ್ಷಾ ಬಂಧನಕ್ಕೆ ಯಾವುದೇ
ಜಾತಿ -ಧರ್ಮಗಳ ಕಟ್ಟು ಪಾಡುಗಳಿಲ್ಲ.ಮಾನವೀಯ ಸಂಭಂದಗಳ
ಬಾಂಧವ್ಯದಲ್ಲಿ ನಂಬಿಕೆ ಇರುವ ಸಮಾಜದ ಪ್ರತಿಯೊಬ್ಬರೂ ಇದನ್ನು
ಆಚರಿಸುತ್ತೇವೆ.ಹಾಗೆ ಸ್ನೇಹದಲ್ಲಿ ಸೋದರ ಸಂಬಂಧವನ್ನು ಗಟ್ಟಿ ಗೊಳಿಸುವ ಸುಸಂದರ್ಭವು ಇದಾಗಿದೆ.ರಕ್ಷೆ ಮನುಷ್ಯರ ನಡುವಿನ ಪವಿತ್ರ ಬಾಂಧವ್ಯವನ್ನು ಬೆಸೆಯುವುದಾಗಿದೆ .

         ಇದನ್ನು ಉತ್ತರ ಭಾರತ ಹಾಗೂ ಮಧ್ಯಪ್ರದೇಶಗಳಲ್ಲಿ ವ್ಯಾಪಕವಾಗಿ ಆಚರಿಸುತ್ತಾರೆ.ಅಕ್ಕ ತಂಗಿಯರು,ಅಣ್ಣ ತಮ್ಮಂದಿರಿಗೆ ರಕ್ಷೆಯನ್ನುಕಟ್ಟಿ ತಮ್ಮ
ಮಾನ ಪ್ರಾಣ ರಕ್ಷಣೆಯ ಹೊಣೆ ,ಜವಾಬ್ದಾರಿಯ ಹೊಣೆ ,ಅಣ್ಣ ತಮ್ಮಂದಿರದ್ದು,
ಎಂಬಅರಿವು ಮೂಡಿಸುವುದಾಗಿದೆ.ರಕ್ಷೆ ಕಟ್ಟಿದ ಸ್ತ್ರೀಯರನ್ನು ಪವಿತ್ರ ಭಾವನೆ
ಯಿಂದ ನೋಡುತ್ತಾ ಅವರಿಗೆ ಸಕಲ ಶ್ರೇಯಸ್ಸನ್ನುಹಾರೈಸುತ್ತಾ ಸಹೋದರಿ
ಯರಂತೆ ಕಾಣುತ್ತಾರೆ.ಹಾಗೂ ಸ್ತ್ರೀಯರು ಸಹ ರಕ್ಷೆಯನ್ನು ಕಟ್ಟಿಕೊಳ್ಳುವ
ಮೂಲಕ ತಮ್ಮ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಿ ಕೊಳ್ಳುವುದು .
ಹಾಗೂ ಸಮಾಜಕ್ಕೂ ನಮಗೂ ನಡುವೆ ಇರುವ ನಂಟನ್ನು ಸೂಚಿಸುವುದರ
ಮೂಲಕ ನಮ್ಮ ಕರ್ತವ್ಯದ ಮನವರಿಕೆ ಮಾಡಿಸುತ್ತಾ, ಇಡಿ ಸಮಾಜದ
ಎಲ್ಲರೂ ತಮ್ಮ ಜಾತಿ ಭಾಷೆ ,ಪ್ರಾಂತ್ಯ ,ಪಕ್ಷ ,ಅಂತಸ್ತು ಇವುಗಳೆಲ್ಲವನ್ನು
ಮೀರಿ ನಾವೆಲ್ಲಾ ಒಂದು. ಎಂದು ಸಾರುತ್ತಾ ಐಕ್ಯ ಮತವನ್ನು ಗಟ್ಟಿಗೊಳಿಸು
ತ್ತಾ.. ನಮ್ಮೆಲ್ಲರ ನಡುವಿನ ಬಾಂಧವ್ಯಕ್ಕೆ ಬೆಸುಗೆಯಾಗುತ್ತೇವೆ.
      
"ಏನ ಬದ್ದ್ಹೋ ಬಲಿಹಿ ರಾಜಾ ದಾನವೇನ್ದ್ರೋ ಮಹಾ ಬಲಃ.
        
ತೀನ ತ್ವಾಮಾನು ಬಧ್ನಾಮಿ ರಕ್ಷೆ ಮಾಚಲ ಮಾಚಲ ."

ಈ ಉಕ್ತಿಯ ಅರ್ಥವೂ ಹೀಗಿದೆ.ದಾನವೆನ್ದ್ರನೂ ,ಮಹಾಬಲನೂ ,
ಆದ ಬಲಿಯ ಕೈ ಯಾವ ರಕ್ಷೆಯಿಂದ ಬಂಧಿತವಾಯಿತೋ, ಆ
ರಕ್ಷೆಯನ್ನು ನಿನ್ನ ಕೈಗೆ ಕಟ್ಟಿದ್ದೇನೆ.ಹೇ ರಕ್ಷೆಯೇ ಕಳಚಿ ಬಿಳದಿರು ..,
ಕಳಚಿ ಬಿಳದಿರು.ಎಂಬುದಾಗಿದೆ.ಈ ಉಕ್ತಿಯು ರಕ್ಷೆಯ ಇತಿಹಾಸವನ್ನು
ಸಾರುತ್ತದೆ.


        ದೇವೇಂದ್ರನಿಗೆ ಶಚಿದೇವಿ ಕಟ್ಟಿದ ರಕ್ಷೆಯಿಂದಾಗಿ ಅಸುರರ ವಿರುದ್ಧ
ಜಯ ಸಾಧಿಸಲು ಸಾಧ್ಯವಾಯಿತು ಎಂಬ ಉಲ್ಲೇಖವೂ ಇದೆ.ಯುದ್ಧ ಸನ್ನದ್ಧರಾದ ಯೋಧರನ್ನು ,ಕಾರ್ಯೋನ್ಮುಖರಾದ ಪುರುಷರನ್ನೂ "ವಿಜಯಿಯಾಗಿ ಬಾ "ಎಂಬ
ಆಶಯದೊಂದಿಗೆ ರಕ್ಷೆ ಕಟ್ಟುವ ಪದ್ಧತಿ ರೂಢಿಯಲ್ಲಿತ್ತು.ಎಂಬುದನ್ನು ದ್ರೌಪದಿ ಶ್ರೀ ಕೃಷ್ಣನಿಗೆ ರಕ್ಷೆಯನ್ನು ಕಟ್ಟಿ, ತನ್ನ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿದ ಸಂಗತಿಯನ್ನು ಮಹಾಭಾರತದಲ್ಲಿ ಕಾಣುತ್ತೇವೆ.ಹೀಗೆ ರಕ್ಷೆ,ರಕ್ಷಣೆಯ ,ಮೈತ್ರಿಯ,ಸೋದರತ್ವದ ದ್ಯೋತಕವಾಗಿದೆ.
         
        ಒಂದಿಷ್ಟು ನೂಲುಗಳನ್ನು ದಾರ ಒಂದರಿಂದ ಬಂಧಿಸಿ ಬಂಧಿಸಿ,ಕುಚ್ಚು ಮಾಡಿದಾಗ ಸಿದ್ಧವಾಗುವ ರಕ್ಷೆಯ ಮಹತ್ವ ಸಾಮಾನ್ಯವಾದುದಲ್ಲ ..!!!!
ಅದು ಒಗ್ಗಟ್ಟಿನ ಬಲ ಹಾಗೂ ಸೌಹಾರ್ಧದ ಸೌಂದರ್ಯವನ್ನು
ಸಾರುವುದರ ಸಂಕೇತವಾಗಿದೆ.
                
        ರಾಜಾಸ್ಥಾನದ ಚಿತ್ತೋಡಿನಲ್ಲಿ "ಜ್ವಾಲ" ಎಂಬ ಪುಟ್ಟ ಹುಡುಗಿಯ
ಮನೆಯಲ್ಲಿ ಅಂದು ರಕ್ಷಾ ಬಂಧನದ ವೈಭವ .ಅ ಮಾರ್ಗವಾಗಿ ಬರುವ ಯಾರಾದರೊಬ್ಬರನ್ನು ಮನೆಯೊಳಗೇ ಕರೆದು ಅತಿಥಿ ಸತ್ಕಾರ ಮಾಡಿ ,
ಸಿಹಿ ಕೊಟ್ಟು ರಕ್ಷೆ ಕಟ್ಟಿದ ನಂತರವೇ ಮನೆಯವರು ಆಹಾರ ಸ್ವೀಕರಿಸಬೇಕೆಂಬ
ನಿಯಮ. ಸರ್ವಾಲಂಕಾರ ಭೂಶಿತಳಾದ ಚೆಂದದ ಹುಡುಗಿಯ ಕಣ್ಣಿಗೆಅಂದು ಕಂಡಿದ್ದು ಕುಖ್ಯಾತ ಡಕಾಯಿತ "ಲಖನ್ ಸಿಂಹ ".ಆದರೆ ಆ ಬಾಲಕಿ ಹೆದರದೆ ಆತನನ್ನುಪ್ರೀತಿಯಿಂದ"ಅಣ್ಣಾ"ಎಂದುಒಳಕ್ಕೆ  ಕರೆದು,ರಕ್ಷೆಕಟ್ಟಿಸಿಹಿತಿನ್ನಿಸಿ ,
ಪಾದಗಳಿಗೆ ನಮಸ್ಕರಿಸಿ ಆಶೀರ್ವಾದವನ್ನು ಬೇಡುತ್ತಾಳೆ .ಜೀವನದಲ್ಲಿ
ಮೊಟ್ಟ ಮೊದಲ ಬಾರಿಗೆ ಅನುಭವಿಸಿದ ಇಂತಹ ಅನೂಹ್ಯ ಪ್ರೀತಿ,
ವಿಶ್ವಾಸಗಳಿಗೆ ಆಡಕಾಯಿತನ ಹೃದಯ ತುಂಬಿ ,ಕಣ್ ತುಂಬಿ ಬಂದು,
ಆಕೆಯ ವಿಶ್ವಾಸಕ್ಕೆ ಪ್ರತಿಯಾಗಿ "ನಿನಗೇನೂ ಉಡುಗೊರೆ ಬೇಕು "
ಎಂದು ಕೇಳಿದಾಗ ಆ ಪುಟ್ಟ ಬಾಲಕಿ "ನೀನು ದರೋಡೆ ವೃತ್ತಿಯನ್ನು
ಬಿಡಬೇಕು "ಎಂದು ಕೇಳಿಕೊಳ್ಳುತ್ತಾಳೆ..ಕೊಟ್ಟ ಮಾತಿನಂತೆಯೇ ಆತ
ಒಪ್ಪಿ, ದರೋಡೆ ವೃತ್ತಿಯನ್ನು ಬಿಡುವುದಲ್ಲದೆ ತನ್ನ ತಪ್ಪೊಪ್ಪಿಕೊಂಡು,
ಹಿಂದೆ ತಾನು ಮಾಡಿದ ಅಪರಾಧಗಳಿಗೆ ಶಿಕ್ಷೆಯನ್ನು ಅನುಭವಿಸುತ್ತಾನೆ.
ಹೀಗೆ ದುಷ್ಟರನ್ನೂ ,ದರೋಡೆಕೋರರನ್ನೂ,ಕೆಟ್ಟ ಭಾವನೆಯವರನ್ನು
ಪರಿವರ್ತಿಸಬಲ್ಲದು ಈ ರಕ್ಷೆ .ಇಂತಹಾ ಪ್ರೀತಿ ಸ್ನೇಹ ಸೌಹಾರ್ಧ
ಐಕ್ಯತೆಯನ್ನು ಗಟ್ಟಿಗೊಳಿಸುವ
ರಕ್ಷಾಬಂಧನದ ಹಾಗೂ ವರಮಹಾ ಲಕ್ಷ್ಮಿ ಹಬ್ಬದ ಹಾರ್ಧಿಕ
ಶುಭಾಶಯಗಳು ನಮ್ಮೆಲ್ಲಾ ಸ್ನೇಹಬಳಗಕ್ಕೂ ....... --

Jul 30, 2011



ಮ-ಮನಸಿನ,
ನೆ-ನೆಮ್ಮದಿ
******* 


ಭಾವವೆಂಬ  ಗೋಡೆಗಳಿಗೆ

ಜ್ಞಾನವೆಂಬ ಕಿಟಕಿಯಿಂದ

ಸ್ವಚ್ಛಗಾಳಿ,  ಶುದ್ಧಕಿರಣ    

ಒಳಗೆ ಸುಳಿಯೇ,

 ದೇಹವೆಂಬ  'ಮನೆಗೆ' 

ಸ್ವಾನಂದಾನುಭವವು  



ಕರ್ತವ್ಯ
*****

ಬಂದದ್ದನ್ನು ಸ್ವೀಕರಿಸುವುದು

ಕರ್ತವ್ಯ

ಅದಕೆ ಆಶಿರ್ವಾದಿಸುವುದು

ಆದ್ಯ ಕರ್ತವ್ಯ 


ವ್ಯಕ್ತಿತ್ವ-ಭಾವ
*********

ವ್ಯಕ್ತಿಯ ಹುಟ್ಟು

ಕಾಮದಿಂದಲಾದರು ,

ವ್ಯಕ್ತಿತ್ವದ ಹುಟ್ಟು

ಪ್ರೇಮದಿಂದಲೇ,  


ಸಂಗೀತದ ಹುಟ್ಟು

ಭಾವದಿಂದಲಾದರು

ಭಾವದ ಹುಟ್ಟು

ಸಂಸ್ಕಾರದಿಂದಲೇ
************   

Jul 25, 2011


*ವೀರಯೋಧನಾಗು*ವಿಶ್ವಮಾನವನಾಗು*

*ಪುಟ್ಟ ಪೂರ್ವಿತ್ *ಗೆ , ಹುಟ್ಟು ಹಬ್ಬದ ಶುಭಾಶಯಗಳು *
*ಬಾಲರವಿಯಾಗು *

ಎನ್ನ ಮನದಂಗಳದ ನಗುವ ಹೂವೆನಿನ್ನ   

ಮುಗ್ಧ ನಗೆ ಕಂಗಳಲಿ 

ಮಿಂಚೊಂದು


ಹೊಮ್ಮುತಿದೆ

ನಿನ್ನೆಳೆಯ ಅದರದಲಿ

ಮಂದಹಾಸವೇ ಅರಳಿ,

ನಿಷ್ಕಲ್ಮಶ ತಣ್ಣನೆಯ ನಗುವಿಗೆ

ಅರಸಿಕರೆದೆಯನು                                                

ಮೀಟಿ ತನ್ನೆಡೆ ಸೆಳೆವ ಮೋಹಕ ನೋಟದಲಿ  

ತಾರೆಗಳು ಮಿನುಗುತಿವೆ   
 


ದುಗುಡದುಮ್ಮಾನಗಳಮರೆಸಿ             
ಮುದುಡಿದ ತಾವರೆ ಅರಳಿಸುವ                
ಸೊಬಗಿನ ಪೌರ್ಣಮಿ ಶಶಿಯಾಗಿ  

ಹಾಲ್ಬೆಳುದಿಂಗಳ  ಹೂ ಮೊಗದ
ವಾತ್ಸಲ್ಯದ ವಾಂಛೆಗೆ  
ಮೂಕನು ವಾಗ್ಮಿಯಾಗುವನು .

ನಗುವಿನ ಹೊನಲು ಮನೆಯಾವರಿಸಿ  
ಮನಗಳ ಮುದಕೆ ಮೂಲವಾಗಿ,   
ಬಂಧವ  ಬೆಸೆವ ಸೇತುವಾಗಿ   ,
ಮುದ್ದು ತೊದಲಿಗೆ ಮುದ್ದಿಸಿ ನಲಿಯಲು  ಸದಾನಂದ ನೀನಾಗಿ  
"ತಿನ್ನಲಾರದ ಹಣ್ಣು ಬಲುರುಚಿ"!!!!!!!!


*ಪೂರ್ವಿತ್ * ಬೆಳಗುತಿರು ಬದುಕಲಿ  ಬಾಲರವಿಯಾಗಿ *

************************








































































Jul 12, 2011

 ದೊಂಬರಾಟ

ದುಬಾರಿ ದುನಿಯಾದೊಳಗೆ

ದೂರ್ವಾಸರ ದೊಂಬರಾಟ

ಧರಣಿಗೆ ಒಡೆಯರೇ

ಶರಣರು,ಸಂತರೆಂಬ

ಹಂತಕರ ಜೋಳಿಗೆ

ಉದ್ಧಾರಕ್ಕೆ,

ಧರ್ಮಾತ್ಮರ ಸೋಗು.

ಕುರ್ಚಿಗಾಗೆ ಕ್ರಾಂತಿ

ಎಬ್ಬಿಸುವ ಕುತಂತ್ರಿಗಳಿಗೆ

ಗಂಟು, ಸೀಟು ಮೀಸಲು.

ತಳ ಗಟ್ಟಿಯಾದಂತೆ

ಮಾಜ ಸೇವೆಗೆಲ್ಲಾ 

ವಿಶ್ರಾಂತಿ...!!!

ಅನುಕಂಪಕ್ಕೆ ಕಣೀರು ! !

ಮಹಾತ್ಮರ ಮುಷ್ಕರಕ್ಕೆ

ಮೂರ್ಖರ ಕೆನೆತ.

ದೊಂಬರ ಹೊಟ್ಟೆಗೆ

ತಣ್ಣೀರು ಬಟ್ಟೆ ಶಾಶ್ವತ
****************

Jul 2, 2011

ಅನುಭವದ ಕಾಂತಿ  

ಹಸಿ ಕಟ್ಟಿಗೆ ಹೊಗೆಯಟ್ಟಲು 
ಉಸಿರು  ಕಟ್ಟಿ ಶ್ವಾಸ ಚೆಲ್ಲಿ
ದಗದಗಿಸುವ  ಒಲೆಯುರಿಯಲಿ
ಹಸಿವು ಕುದಿದು ಹದವಾಗಿ
ಕಾದಿಹ ಹಲವು ಹಸಿವುಗಳ  ತಣಿಸಿ

ಭವಿತವ್ಯದ ನಿರೀಕ್ಷೆಯಲಿ
ನಿಟ್ಟುಸಿರು,  ಬಿಕ್ಕಳಿಕೆಯಲಿ,

ಹೊಗೆಯಲ್ಲಿ ಕಂದಿದ
ನಿಸ್ತೇಜ ನೇತ್ರದಲಿ
ಹನಿಗೂಡಿ ಹಳ್ಳ ಹರಿದು
ದಡ ದಾಟಿ ತುಳುಕಿ ಕೆನ್ನೆ ಮೇಲೆ
ಹರಿದ ಕಂಬನಿಗಳೇ ಹಲವು
ಸುಕ್ಕುಗಳಾಗಿ ಕವಲೊಡೆದು
ನಿಸ್ತೇಜ ನರವಾದಾಗ ,
ಅವ್ವನೆನಲು ಅಂಜಿಕೆಯೇ ...????!!!!! .

ಬಳಲಿದ ಜೀವದ  ಬಯಕೆಗಳೆಲ್ಲಾ...
ಅಲಕ್ಷದ ಕಸಬರಿಕೆ ,

ಅಂಗಳದಲ್ಲಿ  ರಂಗೋಲಿ ಇಡಲು  
ಗೋಮೆಯ ಹಳೆ ಹೆಕ್ಕಳಿಕೆಯ  ಹೆಕ್ಕಿ
ಮತ್ತೆ ಮತ್ತೆ ಓರಣಗೊಳಿಸಿ
ಸೋತ ಕೈ ನರಗಳು
ನೂರಾರು ನೆರಿಗೆಯ ಕವಲುಗಳು.

ನಿತ್ಯ  ಗುಡಿಸಿ ಸಾರಿಸಿ
ಕಲ್ಲುಗಳು  ಹಲ್ಲು ಬಿಟ್ಟಂತೆ
ಅಸ್ತಿ ಪಂಜರ... ಬಸಿದ  ಬದುಕು.

ಬರವಿಲ್ಲದ ಕನಸುಗಳಲ್ಲೇ
ಮಾನವತೆಯ  ಧ್ಯಾನಿಸಿ
ಸಹನಾಮುರ್ತಿಯಾಗಿ
ಬದುಕು ಸಹಿಸಿದ
ಸಾವಿರ ಸುಕ್ಕಿಗೂ ... ಸಾಸಿರ ಕಥೆಗಳು .

ಬಯಕೆ ಬತ್ತಿದ  ನಿಸ್ತೇಜ ಕಂಗಳ  
ಅಸಹಾಯಕ  ನೋಟದಲ್ಲೂ
ಮಿಂಚುವ........  
ಸಾಧನೆಯ ಶಾಂತಿ,
ಅನುಭವದ ಕಾಂತಿ.
ಅವಳ ಶ್ರಮಕ್ಕೆ ದಕ್ಕಿದ್ದು
ಆಶ್ರಮದಲ್ಲಿ ವಿಶ್ರಾಂತಿ...........!!!!!!!
*********************

May 24, 2011

ಸಂಭ್ರಮದ ನಡುವೆಯೇ ...ದಿಘ್ಬ್ರಮ...!!!!!!!!!!!1



ಎಲ್ಲೆಲ್ಲು ಸಮ್ಮೇಳನಗಳ ಸಂಭ್ರಮ, 
ಒಡನೆ ಸಡಗರದ ಅಬ್ಬರದ
ನಡುವೆಯೇ ..! ಸುನಾಮಿಯ..  ದಿಘ್ಭ್ರಮ.!!!!!!!!!

ಸುನಾಮಿಯಲಿ
ಅದೆಷ್ಟೋ..ಸಾವಿರ .. ಬೇನಾಮಿ..!

ನಮಗಿಲ್ಲಿ ಸಡಗರದ  ಹೊಸವರ್ಷ
ಸಾಗರ ಸಂದಣಿಯಲ್ಲಿ ನಡೆದಿದೆ  
ಘೋರ ಸಂಘರ್ಷ

ನಮಗಿಲ್ಲಿ ಹೋಳಿಯ ಸಡಗರ
ಕಡಲಲಿ ಗೋಳಿನ ಆಗರ ,

ನೀಡಿದರಾಯಿತೇ...ನೆರವಿಲ್ಲದ.....
ಸಾಂತ್ವಾನ ....?

ಇಲ್ಲಿ ಬದುಕಿಗೇ... ಸಂಘರ್ಷ
ಅಲ್ಲಿ ಬದುಕಲೇ ಸಾಹಸ ......!!!!!!!!!!!!

ಇಲ್ಲಿ ಸಾಗುತಿದೆ ಬದುಕಲೇ ವಿಕೃತ  ಮೋಸ,
ಅಲ್ಲಿ ಅವಶೇಷಗಳ ನಡುವೆ ದಿಕ್ಕೆಟ್ಟ  
ಆಕ್ರಂದನದ  ...ಶೋಕದ ..ಸ್ಮಶಾನ ವಾಸ  ........!

ಎಷ್ಟಾದರೂ ಸಾಲದಾಗಿದೆ
ಜನ ಸ್ಪಂದನ ...ಸಾಂತ್ವಾನ  ...!!ಮರುಕವೊಂದೆ ....ಅವಶೇಷ...!!!!!!

May 14, 2011

                      ಬುದ್ಧ -ಬದುಕು
        ಒಮ್ಮೊಮ್ಮೆ ಯಾವುದಾದರು ಕಾವ್ಯ ,ಕತೆ, ಕವನ ಲೇಖನ ಇವುಗಳನ್ನು ಓದಿ ಅವುಗಳ ಬಗ್ಗೆ
ಅಚ್ಚರಿ ಮೆಚ್ಚುಗೆ ವ್ಯಕ್ತಪಡಿಸಿದಾಗ ಸಿಗುವಆನಂದ ಪಟ್ಟಶ್ರಮಕ್ಕೆಸಿಕ್ಕಪ್ರತಿಫಲ,ಧನ್ಯತೆ,ಸಾರ್ಥಕತೆ
ಅಪರಿಮಿತ,ಅನನ್ಯ. ಹೀಗಿದ್ದಾಗ ಬದುಕೊಂದು ಮೌಲ್ಯಯುತ ಕಾವ್ಯವಾಗುಳಿಯುವುದು ಎಂತಹ
ಅಪ್ಯಾಯಮಾನವಲ್ಲವೇ...!!!! ಆದರೆ ಯಾವುದೇ ಪ್ರಕಾರವನ್ನು ಮನಮುಟ್ಟುವಂತೆ ನಿರೂಪಿಸುವ
ಶೈಲಿ, ಕಲೆ ಎಲ್ಲರಿಗೂ ಸಿದ್ದಿಸದು.ಅದು ಅಷ್ಟು ಸುಲಭ ಸಾಧ್ಯವೂ ಅಲ್ಲ.ಹಾಗೆಯೇ
ಅದು ಅನುಭವ, ಅನಿಸಿಕೆ, ಕಲ್ಪನೇ ಯಾವುದೇ ಆದರು ಅದನ್ನು ಮುಕ್ತವಾಗಿ ಪ್ರಸ್ತುತಪಡಿಸಿದ
ಯಾವುದೇ ಹಾಸ್ಯ, ವಿಡಂಬನೆಯ, ಸಂದೇಶವುಳ್ಳ ಕೃತಿಗಳು ಹೆಚ್ಚು ಹೆಚ್ಚು ಓದುಗರನ್ನು ಆಕರ್ಷಿಸಿ,
ಮತ್ತು ಮೆಚ್ಚುಗೆ ಪಡೆದ ಅರ್ಥಪೂರ್ಣಲೇಖನವೊಂದು ನಮ್ಮಿಂದ ಹೊರಹೊಮ್ಮಿದಾಗ ನಮ್ಮಶ್ರಮಸಾರ್ಥಕವೆನಿಸುವುದು.ಅತೀವ ಸಂತೋಷವಾಗುವುದು ಎಲ್ಲರಿಗೂ ಸಹಜ.
ಅದು ಕೆಲವೇ ಸಹೃದಯರು ಅರ್ಥೈಸಿ ಅನಂದಿಸಿದರೂ ಸಹ. ಅಂತಹ ಸಂದರ್ಭದಲ್ಲಿ ನನಗನಿಸಿದ್ದು "ಬದುಕೊಂದು ಮೌಲ್ಯಯುತ ಕಾವ್ಯವಾಗುಳಿಯುವುದು ಎಂತಹಾ ಅಪ್ಯಾಯಮಾನ" "ಎನಿಸಿ,"ಬದುಕು"ಎಂಬುದು ಅದೆಷ್ಟು ಹರವಾದದ್ದು ಎನಿಸಿತು.ಹಾಗೆ ಅದರ ಬಗ್ಗೆ ಇನ್ನಷ್ಟು
ಅರಿಯಬೇಕೆನ್ನಿಸಿ ಈ ಲೇಖನ ಮುಂದುವರೆಸಿದೆ.
               
        ಬದುಕು -ಎಂದರೆ ಜೀವ,ಜೀವಂತಿಕೆ,ಜೀವನವನ್ನು ಅರ್ಥೈಸುವ ಶಬ್ದ .ಆದರೆ ಅದು ಕೇವಲ
ಶಭ್ದ ಮಾತ್ರವಲ್ಲ,ಪ್ರತಿ ಜೀವಿಯ ಜೀವಿತದಲ್ಲೂ ಮೌಲ್ಯ- ಅಪಮೌಲ್ಯಗಳನ್ನೂ ತುಲನೆ ಮಾಡುತ್ತಾ
ಬದುಕು ಜಟಕಾ ಬಂಡಿಯಹಾಗೆ ಸಾಗುತ್ತಿರುತ್ತದೆ.ಕೆಲವು ರೈಲಿನಂತೆ.ಮತ್ತೇ ಕೆಲವು
ಜೋಡೆತ್ತಿನ ಬಂಡಿಯಂತೆ ಎತ್ತೆತ್ತಲೋ ಓಡದಂತೆ ಮೂಗುದಾರ ಹಿಡಿದು ಜಗ್ಗಿ ಸರಿದಾರಿಯಲಿ
ನಡೆಸುವ ಮಾಲಿಕನಂತೆ.ಮತ್ತೇ ಕೆಲವು ಸಂತೆಯಲ್ಲಿ ನುಗ್ಗಿ, ಸಿಕ್ಕಿದ್ದಕ್ಕೆ ಮೂತಿ ಹಾಕಲು,
ಅಟ್ಟಲುಹೋದಾಗ ಗಾಬರಿಗೊಂಡು ಎತ್ತೆತ್ತಲೋನುಗ್ಗಿ ತಾನೂ ಗಾಬರಿಗೊಂಡು,
ಇತರರನ್ನು ಗಾಬರಿಗೊಳಿಸಿ ಗೊಂದಲಕ್ಕೀಡುಮಾಡಿ ಪೇಚಿಗೆ ಸಿಕ್ಕಿಸುವಂತೆ ಮಾಡಿ
ಬದುಕು ಸಾಗುತ್ತಿರುತ್ತದೆ.ಒಬ್ಬೊಬ್ಬರದು ಒಂದೊಂದು ತೆರನಾದ ಹೋರಾಟದ ಬದುಕು.
ಬದುಕು ಎಂಬುದು "ನೀನು ಬದುಕು,ಇತರರನ್ನು ದುಕಲು ಬಿಡು" ಎಂಬ ಮೂಲ
ಮಂತ್ರದೊಂದಿಗೆ ಸಮ್ಮಿಲಿತಗೊಂಡಿದೆ. ಹಗಲೆಲ್ಲ ಹುಲ್ಲು ,ಕಸಕಡ್ಡಿ ತಿಂದು ಮಾಲಿಕನಿಗೆ
ಅಮೃತವನ್ನು ನೀಡಿ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳುವ ಕಾಮಧೇನುವಿನಂತೆ
ಹಲವರ ಬದುಕು."ಬದುಕು ಜಟಕಾ ಬಂಡಿ,ವಿಧಿ ಅದರ ಸಾಹೆಬಾ"ಆ ವಿಧಿ ನಡೆಸಿದಂತಾಗಲಿ
ಎಂದು ಕೈ ಚೆಲ್ಲಿಕೂರುವವರು ಹಲವರಾದರೆ,ಗೆಟ್ ಫ್ರೀ ಎನ್ನುವುದು ಕೆಲವರ ಬದುಕು.
    
    ಡಾ.ಎಸ್. ಚಂದ್ರಕಿರಣ್ ರವರ,"ಪ್ರಾಚೀನ ಕಾವ್ಯಗಳಲ್ಲಿ ಮಾನವೀಯ ಮೌಲ್ಯಗಳು"ಬದುಕಿನ
ಕುರಿತು ಬುದ್ಧ ಹೇಳಿರುವ ವಿಚಾರ ಸಾಮಾನ್ಯರಿಗೂ ಸರಳವಾಗಿ ಮನದಾಳಕ್ಕಿಳಿಯುವುದು.
ಭೋಗಲೋಲುಪತೆ,ದೇಹ ದಂಡನೆಗಳ ನಡುವಣ ಸುವರ್ಣ ಮಧ್ಯಮ ಪಥಕ್ಕೆ ಪ್ರಾಶಸ್ತ್ಯ ನೀಡಿದ
ಬುದ್ಧ ನೈತಿಕತೆಯ ಬದುಕಿಗೆ ಪ್ರಾಧಾನ್ಯತೆ ಕೊಡುತ್ತಾನೆ.ಪ್ರತಿ ಮಾನವತ್ವವೂ ವಿಶ್ವಾತ್ಮದ ಒಂದು
ಭಾಗ ಎಂದು ಹೇಳುತ್ತಾನೆ.ವ್ಯಕ್ತಿ ತನ್ನನ್ನು ತಾನು ಗೆಲ್ಲುವುದೇ ದೊಡ್ಡ ವಿಜಯ.ಸಂಯಮವೇ ದೊಡ್ಡ
ಗುಣವೆಂದು ಸಾರಿದ."ನವೈರಂ ವೈರೆಣ ಶಾಮ್ಯತಿ,ಅವೈರೆಣ ಶಾಮ್ಯತಿ" ದ್ವೇಷದಿಂದ
ದ್ವೇಷ ಶಮನವಾಗದು.ಪ್ರೀತಿಯಿಂದ ಶಮನವಾಗುತ್ತದೆ.ಕೋಪವನ್ನು ದಯೆಯಿಂದ,ಕೆಡುಕನ್ನು
ಒಳಿತಿನಿಂದ ಗೆಲ್ಲಬೇಕು.ಹೀಗೆಬದುಕಿನ ಮಾರ್ಗದರ್ಶಕ ನಿಲುವುಗಳನ್ನುಪ್ರತಿಪಾದಿಸುತ್ತಾನೆ.
ಹಲವಾರು ಕ್ಷೇತ್ರದಲ್ಲಿ ಹಲವಾರು ಬಗೆಯಲ್ಲಿ ಸಾಧಿಸಿ ಸಾರ್ಥಕ ಬದುಕನ್ನಾಗಿಸಿಕೊಳ್ಳುವ
ಹಂಬಲ ಹಲವರಿಗೆ. ಬದುಕಿಗೆ ಬದ್ಧನಾದ ಬುದ್ಧನ,ಬದುಕಿನ ಬಗೆಗಿನ ವಿಚಾರಧಾರೆಯಲ್ಲಿ ವ್ಯಕ್ತಿ ತಾನೇ ತನ್ನ ಪರಿಶ್ರಮದಿಂದ ದುಡಿದು ಬದುಕಬೇಕು "ಧಮ್ಮ,ದೀಪೋ,ವಿಹರಥ.ಧಮ್ಮ ಸರಣ ಅನನ್ನಸರಣ"ಅಂದರೆ "
"ನಿನಗೆ ನೀನೇ ದಿಪವಾಗು.ಬೆಳಕಾಗು ಅನ್ಯರನ್ನು ಆಶ್ರಾಯಿಸಬೇಡ."
ಹಾಗೆ "ನಾನು ಮಾರ್ಗಧಾತನೆ ಹೊರತು ಮುಕ್ತಿಧಾತನಲ್ಲ"ನಿನ್ನ ಸುಖಕ್ಕೆ-ನಿನ್ನ ದುಃಖಕ್ಕೆ,
ನಿನ್ನ ಮಂಗಳಕ್ಕೆ ,ನಿನ್ನ ಅಮಂಗಳಕ್ಕೆನೀನೇ ಜವಾಬ್ದಾರ"ನೆಂದ.ಅದಕ್ಕಾಗಿ ಬದುಕಿನ ಸತ್ಯವನ್ನು
ಕುರಿತು ಗಾಢವಾಗಿ ವಿಚಾರಮಾಡಬೇಕು.ಈ ವಿಚಾರಗಳಿಂದಲೇ ಮನುಷ್ಯ ಸಹಜ ಹಾಗೂ
ಸ್ವತಂತ್ರನಾಗುತ್ತಾನೆ.ವಿಚಾರಗಳ ಮೂಲಕ ಬದುಕನ್ನು ಸಹ್ಯಗೊಳಿಸಿಕೊಳ್ಳುವುದೇ ಧರ್ಮ.ಎಲ್ಲಿ
ದಾರಿಗಳಿಲ್ಲವೋ ಅಲ್ಲಿ ದಾರಿ ಮಾಡಿಕೊಂಡು ನಮಗೆ ನಾವೇ ದಾರಿದೀಪವಾಗುವುದು ಬದುಕು.
ದೇವರು,ಧರ್ಮ,ಶಾಸ್ತ್ರ ಗುರು ಇತ್ಯಾದಿಗಳ ನೆರವಿಲ್ಲದೆ ಮನುಷ್ಯ ತನ್ನ ಬಿಡುಗಡೆಯನ್ನು,ತನ್ನ
ದಾರಿಯನ್ನು ತಾನೇ ಕಂಡುಕೊಳ್ಳಬೇಕು. ಎಂದು ಜಗತ್ತಿನ ಚರಿತ್ರೆಯಲ್ಲಿ ಮೊಟ್ಟಮೊದಲಿಗೆ
ಹೇಳಿದವನು ಬುದ್ಧನೊಬ್ಬನೇ. ಬದುಕು ಪ್ರೇಮದ ದಾರಿದೀಪವಾಗಿ ಮಾನವಲೋಕದ ಕಷ್ಟ
ಕಾರ್ಪಣ್ಯ ಆತಂಕ ದುಗುಡವನ್ನು ದಾಟಿ ಕ್ಷುದ್ರವಾದುದೆಲ್ಲವನ್ನು ತಿರಸ್ಕರಿಸಿ,ಗಟ್ಟಿಯಾದ
ಮಾನವೀಯ ವೈಚಾರಿಕತೆಯ ನೆಲೆಗಟ್ಟಿನಮೇಲೆ ತನ್ನ ಸಮಾಜೋದ್ದಾರ ಧಾರ್ಮಿಕ
ನಿಲುವುಗಳನ್ನು ರೂಪಿಸಿದ ಬುದ್ದ ಹೇಳಿದ್ದು ,ಉದಾತ್ತ ಸತ್ಯಗಳನ್ನು ಕುರಿತು.
ಧರ್ಮವೆಂದರೆ ವಾಸ್ತವಿಕ ಸತ್ಯದಿಂದ ಬದುಕನ್ನು ಸಹ್ಯವಾಗಿ ರೂಪಿಸಿಕೊಳ್ಳುವ ಜೀವನ ಕಲೆ.
ಹೀಗಾಗಿ ಬುದ್ಧನ ಭೋಧನೆಗಳನ್ನು ಧರ್ಮ ,ತತ್ವ ಎಂದು ತಿಳಿಯುವುದಕ್ಕಿಂತ,ಮೈತ್ರಿ ಕರುಣೆ ,
ಮುದಿತಾ ,ಸಮತಾ ಎಂಬ ನಾಲ್ಕು ಗುಣಗಳನ್ನು ವಿಶ್ವ ಮಾನವರಾಗಿ ಜೀವಿಸಬಹುದಾದ ಬೆಳಕಿನ
ದಾರಿ ಬದುಕು.ಬುದ್ದನ ಇಂತಹ ಆದರ್ಶ ಆಶಯಗಳಿಂದ ಆಕರ್ಷಿತನಾದ ಐನ್ ಸ್ಟೀನ್ ಪ್ರಕಾರ
"ವಿಶ್ವ ಧರ್ಮವಾಗುವ ಯೋಗ್ಯತೆ ಇರುವುದು ಬೌದ್ಧ ಧರ್ಮಕ್ಕೆ ಮಾತ್ರವೇ" ಎಂದಿದ್ದಾನೆ.
ಮಹಾಕವಿ ಕುವೆಂಪುರವರು ಶತಮಾನದ ಕಾದಂಬರಿ ಕಾನೂರು ಹೆಗ್ಗಡತಿಯಲ್ಲಿ ಹೂವಯ್ಯನನ್ನು
ಬೌದ್ಧ ನಾಗಿ ಪರಿವರ್ತಿಸುತ್ತಾರೆ.ಸ್ವತಃ ಕುವೆಂಪುರವರೇ ಕೊನೆಗಾಲದಲ್ಲಿ ಬುದ್ಧನ ಅನುಯಾಯಿಯಾಗಿದ್ದರು.ಇಂತಹಾ ಯಾವುದೇ ಧರ್ಮದ ಕಟ್ಟುಪಾಡುಗಳು ಇಲ್ಲದ ಬುದ್ಧನ
ಬೋಧನೆಯಿಂದ ಬಾಬಾಸಾಹೇಬರಂತಹಾ ಸಮನ್ವಯಕಾರರು ಆಕರ್ಶಿತರಾದರೆಂದರೆ
ಅಚ್ಚರಿಯಿಲ್ಲ.
ಬುದ್ಧ ನೆಂದರೆ ಜಾಗೃತನಾದವನು. ನೈಸರ್ಗಿಕ ಸತ್ಯದ ಪ್ರತಿಪಾದಕನಾದ ಬುದ್ಧ ಸನ್ನಡತೆ,
ಸಚ್ಚಾರಿತ್ರ್ಯ,ಸದ್ಗುಣಗಳನ್ನೂ ತನ್ನ ಧರ್ಮದ ತಳಪಾಯವೆಂದು ತಿಳಿದು ಆಚರಿಸಿದವನು.
ಹಸಿವನ್ನು ಮಹಾರೋಗವೆಂದು,ದಾರಿದ್ರ್ಯವನ್ನು ಮಹಾ ದುಃಖವೆಂದು,ಜೀವನಕ್ಕೆ ಅಗತ್ಯವಾದುದನ್ನು ಗಳಿಸಲೇಬೇಕು.ಆದರೆ ಮಿತಿಮೀರಿ ಗಳಿಸಬಾರದು ಎಂಬುದು
ಆತನ ನಿಯಮ."ಎಂದೂ ಪುನರ್ನವೀಕರಣ ಗೊಳ್ಳದ ನೈಸರ್ಗಿಕ ಸಂಪತ್ತು ವೃಥಾ ಪೋಲಾಗದಂತೆ ಎಚ್ಚರವಹಿಸಿ ಮಾಡುವ ಸಾಮಾಜಿಕ ಉತ್ಪಾದನೆ ಮತ್ತು ಸಾಮುದಾಯಿಕ
ಬಳಕೆಯನ್ನು ಪ್ರತಿಪಾದಿಸಿದ.ಜನರ ಅಗತ್ಯಕ್ಕಾಗಿ ಎಲ್ಲಾ ಶಾಸ್ತ್ರ ಗಳು ,ಎಲ್ಲಾ ತಿಳುವಳಿಕೆಗಳು
ಅತ್ಯಗತ್ಯ.ಇದು ಅಭಿವೃದ್ಧಿಯ ಮೊದಲ ಸತ್ಯ.ನಿಜ ಲೋಕದಲ್ಲಿ ಸಂಕಟ ಇರಬಾರದು.ಹಾಗೂ ಅನಗತ್ಯ ಭೋಗವು ಇರಬಾರದು.ಇವೆರಡರ ಸಂತೃಪ್ತಿ ಸ್ಥಿತಿಯನ್ನು ಅಭಿವೃದ್ಧಿ ಎಂದು ಸಮರ್ಥಿಸಿ. ಅಪರಿಮಿತ
ಉತ್ಪಾದನೆ ಸಮಾಜವನ್ನು ಆಕ್ರಮಣ ಶೀಲವನ್ನಾಗಿಸುತ್ತದೆ.ಸಮುದಾಯ ಅಸಮಾನತೆಯಿಂದ ನರಳುತ್ತದೆ.
ಹಾಗಾಗಿ ಸಮಾಜವನ್ನಾಧರಿಸಿದ ಅವಶ್ಯಕತೆ ಸೂಕ್ತವಾದದ್ದು.ಎನ್ನುತ್ತಾನೆ.
 
ಇಂತಹಾ ಮಹಾತ್ಮರ ಆದರ್ಶದ ಬೆಳಕಿನಲ್ಲಿ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳುವುದು ನಮ್ಮ ನಮ್ಮ ಕೈಲ್ಲೇ ಇದೆ.ಶ್ರದ್ದೆ, ಶ್ರಮ,ಆಸಕ್ತಿ,ಅವಶ್ಯಕತೆ,ಮಿತಿ ಎಂಬುದು ನಮ್ಮ ಅರಿವಿನ ಅರಿವಿಗೆ ಶರಣಾದಾಗ ಬದುಕು ಅದೆಷ್ಟು ಸುಂದರವಲ್ಲವೇ...!!!!!!!!
--

May 9, 2011

ತಾಯಂದಿರ ದಿನದ ಶುಭಾಷೆಯಗಳು....!!!!!


ಹಾಯ್ ಮೊಮ್,
ತಾಯಂದಿರ ದಿನದ ಶುಭಾಷೆಯಗಳು....!!!!!
Posted by Picasa

May 5, 2011

ಬೆಳ್ಳಿ ಬಟ್ಟಲೊಳು  ಮಧುರಸ


ಅಡುಗೆಗಾಗಿ ಒಡೆದ ಕಾಯಿ,
ಬೆಳ್ಳಿ ಬಟ್ಟಲೊಳಗಿನ
ಕಂಪಾದ ತಿಳಿರಸ 

ಆಸೆಯಲಿ ತುಸು ಸವಿಯಲು 
ಆಹಾ......ಎಂಥಾ ....ಮಧುರ ...!!!!!!!!
ತಕ್ಷಣವೇ....ನೆನಪಾದದ್ದು.....

ಒಲವಿನ ಮಧುವಿಗೆ
ಸವಿಯಾದುದನೆಲ್ಲಾ ಸವಿಸಿ

ಸಂಭ್ರಮಿಸುವ ಹಂಬಲಕೆ
ಬೆಂಬಲಿಸುವ ಮನದ 
ಕರೆಯು, ನಿನಗೆ  ಸವಿಸೆ....,
ಅದನು ಸವಿದು.....
ಅಭಿಮಾನದಿ.......

"ನೀ..... ಶಬರಿ.....!!"

ಎಂದುಲಿದು........, 

ನೀ......ರಾಮನಾದೆ...!! 

ವೈದೇಹಿಗೆ ಮುನ್ನ,
ಬಾಯ್ಬಿಟ್ಟ
ಮಾತೆಯ ಬಾಹುವಿನೊಳಗೆ...
ನೀ..ಸೇರಿ..... ಹೋದೇ........!!!!!!!

ಆರಾಧನೆಗೆ ಅಣಿಯಾದ 
ವೆಂಕಟೇಶ್ವರನಾದೇ....!! 
ನೆನಪಿನ ಅಭಿಷೇಕಕೆ....ನೀ ...   
ನಾರಿಕೇಳವಾದೆ.......!!!!!!
++++++++++++++++   

Apr 20, 2011

ಉಳಿಯಬೇಕು ಬದುಕು ಎಲ್ಲರೆದೆಗಳಲಿ


ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಬಾಯಾರಿ ಬಳಲಿದಾಗ
ನೀರಡಿಕೆಯನಳಿಸುವ ಜೀವಜಲದಂತೆ
ಭೂಮಿಯನು ತಣಿಸುವ ಕೆರೆ ತೊರೆಯಂತೆ

ಉಳಿಯಬೇಕು ಎಲ್ಲರೆದೆಗಳಲಿ
ಸವಿಯಾಗಿ ತಂಪೆರೆವ ತನಿವಣ್ಣಿನಂತೆ 
ಫಲವನೀವ ಪಾದಪಗಳಂತೆ  
ಬೇಧವೆಣಿಸದೆ ನೆರಳನೀವ ವಟ ವೃಕ್ಷದಂತೆ

ಉಳಿಯಬೇಕು ಬದುಕು  ಎಲ್ಲರೆದೆಗಳಲಿ
ತಲೆಮಾರನು ಸಲಹುವ ನಾರಿಕೇಳ 
ಕಲ್ಪವೃಕ್ಷದಂತೆ, ಬೇಧವಿರದೇ ಹಬ್ಬಿ 
ಪಸರಿಸುವ  ಹೂಗಳ ಪರಿಮಳದಂತೆ.

ಉಳಿಯಬೇಕು ಬದುಕು ಎಲ್ಲರೆದೆಗಳಲಿ 
ಇಂಪಾದ  ಕೋಗಿಲೆಯ ಮಧುರಗಾನದಂತೆ
ಹಕ್ಕಿಗಳ ಚಿಲಿಪಿಲಿಯ ಕಲರವದಂತೆ
ಆಹ್ಲಾದವನಿವ  ಪ್ರಕೃತಿಯ 
ಸೌಂದರ್ಯದ ಹಚ್ಚ ಹಸುರಿನಂತೆ  

ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಜುಳುಜುಳು ಹರಿವ  ಜಲದ ಕಲರವದಂತೆ, 
ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಪುರಂದರಕನಕ  ದಾಸವರೇಣ್ಯರ ಸಾಮಾಜಿಕ 
ಕಳಕಳಿಯ ಸುಮಧುರ ಸಂಕೀರ್ತನದಂತೆ 

ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಮಾನವತೆಯ ಮೆರೆದ ಶಂಕರ
ರಾಮಾನುಜ ಮಧ್ವ ಶಿವಶರಣ ಅಂಬೇಡ್ಕರ್ರಂತೆ,  
ವೀರ ಯೋಧರ ನಿಸ್ವಾರ್ಥದಂತೆ

ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಮುದ್ದುಕಂದನ ಮುಗ್ಧ ನಗುವಿನಂತೆ
ಅಚ್ಚಳಿಯದ ಅಂದದ  ಹೂನಗುವಿನಂತೆ
ಹಸುಗೂಸಿನ ನಸುನಗುವಂತೆ

ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಜಗವಿರುವರೆಗೆ ಅರಿವರಳಿಸುವ 
ಕಾವ್ಯೋತ್ಸವದ ಮೂರ್ತಿಗಳಾಗಿ ಮೆರೆಯುತ್ತಿರುವ
ಕುವೆಂಪು ಬೇಂದ್ರೆ ಗುಂಡಪ್ಪ ಕಾರಂತರಂತೆ 

ಉಳಿಯಬೇಕು ಬದುಕು ಎಲ್ಲರೆಗಳಲಿ 
ವಿಕಲಚೇತನರ ಆತ್ಮ ಚೈತನ್ಯದಂತೆ 
ನಲಿಯಬೇಕು ನೆನಪು ದೀನದಲಿತರ ,
ವಿಕಲ ಚೇತನರ ಬದುಕಿನಲಿ 

ಅಳಿಯಬೇಕು ಎಲ್ಲರೆದೆಗಳಲಿ 
ದ್ವೇಷ ಅಸೂಯೆ ಅಹಂ 
*************