ದೊಂಬರಾಟ
ದುಬಾರಿ ದುನಿಯಾದೊಳಗೆ
ದೂರ್ವಾಸರ ದೊಂಬರಾಟ
ಧರಣಿಗೆ ಒಡೆಯರೇ
ಶರಣರು,ಸಂತರೆಂಬ
ಹಂತಕರ ಜೋಳಿಗೆ
ಉದ್ಧಾರಕ್ಕೆ,
ಧರ್ಮಾತ್ಮರ ಸೋಗು.
ಕುರ್ಚಿಗಾಗೆ ಕ್ರಾಂತಿ
ಎಬ್ಬಿಸುವ ಕುತಂತ್ರಿಗಳಿಗೆ
ಗಂಟು, ಸೀಟು ಮೀಸಲು.
ತಳ ಗಟ್ಟಿಯಾದಂತೆ
ಸಮಾಜ ಸೇವೆಗೆಲ್ಲಾ
ವಿಶ್ರಾಂತಿ...!!!
ಅನುಕಂಪಕ್ಕೆ ಕಣೀರು ! !
ಮಹಾತ್ಮರ ಮುಷ್ಕರಕ್ಕೆ
ಮೂರ್ಖರ ಕೆನೆತ.
ದೊಂಬರ ಹೊಟ್ಟೆಗೆ
ತಣ್ಣೀರು ಬಟ್ಟೆ ಶಾಶ್ವತ
****************