ಬೆಳ್ಳಿ ಬಟ್ಟಲೊಳು ಮಧುರಸ
ಅಡುಗೆಗಾಗಿ ಒಡೆದ ಕಾಯಿ,
ಬೆಳ್ಳಿ ಬಟ್ಟಲೊಳಗಿನ
ಕಂಪಾದ ತಿಳಿರಸ
ಆಸೆಯಲಿ ತುಸು ಸವಿಯಲು
ಆಹಾ......ಎಂಥಾ ....ಮಧುರ ...!!!!!!!!
ತಕ್ಷಣವೇ....ನೆನಪಾದದ್ದು.....
ಒಲವಿನ ಮಧುವಿಗೆ
ಸವಿಯಾದುದನೆಲ್ಲಾ ಸವಿಸಿ
ಸಂಭ್ರಮಿಸುವ ಹಂಬಲಕೆ
ಬೆಂಬಲಿಸುವ ಮನದ
ಕರೆಯು, ನಿನಗೆ ಸವಿಸೆ....,
ಅದನು ಸವಿದು.....
ಅಭಿಮಾನದಿ.......
"ನೀ..... ಶಬರಿ.....!!"
ಎಂದುಲಿದು........,
ನೀ......ರಾಮನಾದೆ...!!
ವೈದೇಹಿಗೆ ಮುನ್ನ,
ಬಾಯ್ಬಿಟ್ಟ
ಮಾತೆಯ ಬಾಹುವಿನೊಳಗೆ...
ನೀ..ಸೇರಿ..... ಹೋದೇ........!!!!!!!
ಆರಾಧನೆಗೆ ಅಣಿಯಾದ
ವೆಂಕಟೇಶ್ವರನಾದೇ....!!
ನೆನಪಿನ ಅಭಿಷೇಕಕೆ....ನೀ ...
ನಾರಿಕೇಳವಾದೆ.......!!!!!!
++++++++++++++++