ಪರಿಸರ ಜಾಗೃತಿ ಕಾರ್ಯಕ್ರಮ ಎಂ ಕೃಷ್ಣ ಅಂಧ ಮಕ್ಕಳ ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಕ್ಕಳ ಆರೋಗ್ಯಕ್ಕೆ ಪೂರಕವಾದ ಪಪಾಯ ಹಲಸು ,ಮಾವು ತೆಂಗು ಮತ್ತು ವಿವಿಧ ಬಗೆಯ ಹೂ ಗಿಡಗಳನ್ನು ಶಾಲೆಯ ಮಕ್ಕಳೊಂದಿಗೆ ಎಲ್ಲರೂ ಉತ್ಸಾಹದಿಂದ ನೆಟ್ಟೆವು. ಮತ್ತು ಪರಿಸರಕ್ಕೆ ಪೂರಕವಾದ ವೈಜ್ಞಾನಿಕ ಪರಿಣಾಮ ಬೀರುವ ಅಗ್ನಿಹೋತ್ರದಿಂದ ಕಾರ್ಯಕ್ರಮ ಆರಂಭಿಸಲಾಯಿತು. ಮಕ್ಕಳೂ ಸಹ ಸಮಿತ್ತನ್ನು ಅರ್ಪಿಸಿ ಆನಂದಿಸಿದರು. ಹಿಂದೆ ಋಷಿಮುನಿಗಳು ಪರಿಸರ ಶುದ್ಧಿಗಾಗಿ ,ಸಮಾಜದ ಒಳಿತಿಗಾಗಿ ಹೋಮಹವನಗಳನ್ನು ಮಾಡುತ್ತಿದ್ದರು ಪ್ರಸ್ತುತ ಪರಿಸ್ಥಿತಿಯಲ್ಲಿ ಇಂತಹ ಸರಳ ವಿಧಾನವನ್ನು ಅನುಸರಿಸುವುದರಿಂದ ವಾಯುಮಾಲಿನ್ಯವನ್ನು ತಡೆಗಟ್ಟ ಬಹುದಾಗಿದೆ.