Aug 12, 2011

                ಶ್ರಾವಣಮಾಸ ಹಿಂದೂಗಳಿಗೆ ಬಹಳ ಪವಿತ್ರವಾದಮಾಸ .ನಾಗರಪಂಚಮಿ ,ವರಮಹಾಲಕ್ಷ್ಮಿ ,ಗೋಕುಲಾಷ್ಟಮಿ,
ಉಪಾಕರ್ಮ. ಹೀಗೆ ಹಬ್ಬಗಳು ಸಾಲುಸಾಲಾಗಿ  ಬರುತ್ತವೆ .
ಹಾಗೆ ಶ್ರಾವಣ ಪೌರ್ಣಮಿಯಂದು ರಕ್ಷಾಬಂಧನವನ್ನುಭಕ್ತಿ, ಶ್ರದ್ಧೆ,
ಸಂಭ್ರಮಗಳಿಂದ ಆಚರಿಸುತ್ತೇವೆ.ಅಮರನಾಥದಲ್ಲಿ ಶಿವಲಿಂಗದರ್ಷನವಾಗುವುದು
ಈ ಸಮಯದಲ್ಲೇ ಎಂದು ಹೇಳಲಾಗುವುದು.ರಕ್ಷಾ ಬಂಧನಕ್ಕೆ ಯಾವುದೇ
ಜಾತಿ -ಧರ್ಮಗಳ ಕಟ್ಟು ಪಾಡುಗಳಿಲ್ಲ.ಮಾನವೀಯ ಸಂಭಂದಗಳ
ಬಾಂಧವ್ಯದಲ್ಲಿ ನಂಬಿಕೆ ಇರುವ ಸಮಾಜದ ಪ್ರತಿಯೊಬ್ಬರೂ ಇದನ್ನು
ಆಚರಿಸುತ್ತೇವೆ.ಹಾಗೆ ಸ್ನೇಹದಲ್ಲಿ ಸೋದರ ಸಂಬಂಧವನ್ನು ಗಟ್ಟಿ ಗೊಳಿಸುವ ಸುಸಂದರ್ಭವು ಇದಾಗಿದೆ.ರಕ್ಷೆ ಮನುಷ್ಯರ ನಡುವಿನ ಪವಿತ್ರ ಬಾಂಧವ್ಯವನ್ನು ಬೆಸೆಯುವುದಾಗಿದೆ .

         ಇದನ್ನು ಉತ್ತರ ಭಾರತ ಹಾಗೂ ಮಧ್ಯಪ್ರದೇಶಗಳಲ್ಲಿ ವ್ಯಾಪಕವಾಗಿ ಆಚರಿಸುತ್ತಾರೆ.ಅಕ್ಕ ತಂಗಿಯರು,ಅಣ್ಣ ತಮ್ಮಂದಿರಿಗೆ ರಕ್ಷೆಯನ್ನುಕಟ್ಟಿ ತಮ್ಮ
ಮಾನ ಪ್ರಾಣ ರಕ್ಷಣೆಯ ಹೊಣೆ ,ಜವಾಬ್ದಾರಿಯ ಹೊಣೆ ,ಅಣ್ಣ ತಮ್ಮಂದಿರದ್ದು,
ಎಂಬಅರಿವು ಮೂಡಿಸುವುದಾಗಿದೆ.ರಕ್ಷೆ ಕಟ್ಟಿದ ಸ್ತ್ರೀಯರನ್ನು ಪವಿತ್ರ ಭಾವನೆ
ಯಿಂದ ನೋಡುತ್ತಾ ಅವರಿಗೆ ಸಕಲ ಶ್ರೇಯಸ್ಸನ್ನುಹಾರೈಸುತ್ತಾ ಸಹೋದರಿ
ಯರಂತೆ ಕಾಣುತ್ತಾರೆ.ಹಾಗೂ ಸ್ತ್ರೀಯರು ಸಹ ರಕ್ಷೆಯನ್ನು ಕಟ್ಟಿಕೊಳ್ಳುವ
ಮೂಲಕ ತಮ್ಮ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಿ ಕೊಳ್ಳುವುದು .
ಹಾಗೂ ಸಮಾಜಕ್ಕೂ ನಮಗೂ ನಡುವೆ ಇರುವ ನಂಟನ್ನು ಸೂಚಿಸುವುದರ
ಮೂಲಕ ನಮ್ಮ ಕರ್ತವ್ಯದ ಮನವರಿಕೆ ಮಾಡಿಸುತ್ತಾ, ಇಡಿ ಸಮಾಜದ
ಎಲ್ಲರೂ ತಮ್ಮ ಜಾತಿ ಭಾಷೆ ,ಪ್ರಾಂತ್ಯ ,ಪಕ್ಷ ,ಅಂತಸ್ತು ಇವುಗಳೆಲ್ಲವನ್ನು
ಮೀರಿ ನಾವೆಲ್ಲಾ ಒಂದು. ಎಂದು ಸಾರುತ್ತಾ ಐಕ್ಯ ಮತವನ್ನು ಗಟ್ಟಿಗೊಳಿಸು
ತ್ತಾ.. ನಮ್ಮೆಲ್ಲರ ನಡುವಿನ ಬಾಂಧವ್ಯಕ್ಕೆ ಬೆಸುಗೆಯಾಗುತ್ತೇವೆ.
      
"ಏನ ಬದ್ದ್ಹೋ ಬಲಿಹಿ ರಾಜಾ ದಾನವೇನ್ದ್ರೋ ಮಹಾ ಬಲಃ.
        
ತೀನ ತ್ವಾಮಾನು ಬಧ್ನಾಮಿ ರಕ್ಷೆ ಮಾಚಲ ಮಾಚಲ ."

ಈ ಉಕ್ತಿಯ ಅರ್ಥವೂ ಹೀಗಿದೆ.ದಾನವೆನ್ದ್ರನೂ ,ಮಹಾಬಲನೂ ,
ಆದ ಬಲಿಯ ಕೈ ಯಾವ ರಕ್ಷೆಯಿಂದ ಬಂಧಿತವಾಯಿತೋ, ಆ
ರಕ್ಷೆಯನ್ನು ನಿನ್ನ ಕೈಗೆ ಕಟ್ಟಿದ್ದೇನೆ.ಹೇ ರಕ್ಷೆಯೇ ಕಳಚಿ ಬಿಳದಿರು ..,
ಕಳಚಿ ಬಿಳದಿರು.ಎಂಬುದಾಗಿದೆ.ಈ ಉಕ್ತಿಯು ರಕ್ಷೆಯ ಇತಿಹಾಸವನ್ನು
ಸಾರುತ್ತದೆ.


        ದೇವೇಂದ್ರನಿಗೆ ಶಚಿದೇವಿ ಕಟ್ಟಿದ ರಕ್ಷೆಯಿಂದಾಗಿ ಅಸುರರ ವಿರುದ್ಧ
ಜಯ ಸಾಧಿಸಲು ಸಾಧ್ಯವಾಯಿತು ಎಂಬ ಉಲ್ಲೇಖವೂ ಇದೆ.ಯುದ್ಧ ಸನ್ನದ್ಧರಾದ ಯೋಧರನ್ನು ,ಕಾರ್ಯೋನ್ಮುಖರಾದ ಪುರುಷರನ್ನೂ "ವಿಜಯಿಯಾಗಿ ಬಾ "ಎಂಬ
ಆಶಯದೊಂದಿಗೆ ರಕ್ಷೆ ಕಟ್ಟುವ ಪದ್ಧತಿ ರೂಢಿಯಲ್ಲಿತ್ತು.ಎಂಬುದನ್ನು ದ್ರೌಪದಿ ಶ್ರೀ ಕೃಷ್ಣನಿಗೆ ರಕ್ಷೆಯನ್ನು ಕಟ್ಟಿ, ತನ್ನ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿದ ಸಂಗತಿಯನ್ನು ಮಹಾಭಾರತದಲ್ಲಿ ಕಾಣುತ್ತೇವೆ.ಹೀಗೆ ರಕ್ಷೆ,ರಕ್ಷಣೆಯ ,ಮೈತ್ರಿಯ,ಸೋದರತ್ವದ ದ್ಯೋತಕವಾಗಿದೆ.
         
        ಒಂದಿಷ್ಟು ನೂಲುಗಳನ್ನು ದಾರ ಒಂದರಿಂದ ಬಂಧಿಸಿ ಬಂಧಿಸಿ,ಕುಚ್ಚು ಮಾಡಿದಾಗ ಸಿದ್ಧವಾಗುವ ರಕ್ಷೆಯ ಮಹತ್ವ ಸಾಮಾನ್ಯವಾದುದಲ್ಲ ..!!!!
ಅದು ಒಗ್ಗಟ್ಟಿನ ಬಲ ಹಾಗೂ ಸೌಹಾರ್ಧದ ಸೌಂದರ್ಯವನ್ನು
ಸಾರುವುದರ ಸಂಕೇತವಾಗಿದೆ.
                
        ರಾಜಾಸ್ಥಾನದ ಚಿತ್ತೋಡಿನಲ್ಲಿ "ಜ್ವಾಲ" ಎಂಬ ಪುಟ್ಟ ಹುಡುಗಿಯ
ಮನೆಯಲ್ಲಿ ಅಂದು ರಕ್ಷಾ ಬಂಧನದ ವೈಭವ .ಅ ಮಾರ್ಗವಾಗಿ ಬರುವ ಯಾರಾದರೊಬ್ಬರನ್ನು ಮನೆಯೊಳಗೇ ಕರೆದು ಅತಿಥಿ ಸತ್ಕಾರ ಮಾಡಿ ,
ಸಿಹಿ ಕೊಟ್ಟು ರಕ್ಷೆ ಕಟ್ಟಿದ ನಂತರವೇ ಮನೆಯವರು ಆಹಾರ ಸ್ವೀಕರಿಸಬೇಕೆಂಬ
ನಿಯಮ. ಸರ್ವಾಲಂಕಾರ ಭೂಶಿತಳಾದ ಚೆಂದದ ಹುಡುಗಿಯ ಕಣ್ಣಿಗೆಅಂದು ಕಂಡಿದ್ದು ಕುಖ್ಯಾತ ಡಕಾಯಿತ "ಲಖನ್ ಸಿಂಹ ".ಆದರೆ ಆ ಬಾಲಕಿ ಹೆದರದೆ ಆತನನ್ನುಪ್ರೀತಿಯಿಂದ"ಅಣ್ಣಾ"ಎಂದುಒಳಕ್ಕೆ  ಕರೆದು,ರಕ್ಷೆಕಟ್ಟಿಸಿಹಿತಿನ್ನಿಸಿ ,
ಪಾದಗಳಿಗೆ ನಮಸ್ಕರಿಸಿ ಆಶೀರ್ವಾದವನ್ನು ಬೇಡುತ್ತಾಳೆ .ಜೀವನದಲ್ಲಿ
ಮೊಟ್ಟ ಮೊದಲ ಬಾರಿಗೆ ಅನುಭವಿಸಿದ ಇಂತಹ ಅನೂಹ್ಯ ಪ್ರೀತಿ,
ವಿಶ್ವಾಸಗಳಿಗೆ ಆಡಕಾಯಿತನ ಹೃದಯ ತುಂಬಿ ,ಕಣ್ ತುಂಬಿ ಬಂದು,
ಆಕೆಯ ವಿಶ್ವಾಸಕ್ಕೆ ಪ್ರತಿಯಾಗಿ "ನಿನಗೇನೂ ಉಡುಗೊರೆ ಬೇಕು "
ಎಂದು ಕೇಳಿದಾಗ ಆ ಪುಟ್ಟ ಬಾಲಕಿ "ನೀನು ದರೋಡೆ ವೃತ್ತಿಯನ್ನು
ಬಿಡಬೇಕು "ಎಂದು ಕೇಳಿಕೊಳ್ಳುತ್ತಾಳೆ..ಕೊಟ್ಟ ಮಾತಿನಂತೆಯೇ ಆತ
ಒಪ್ಪಿ, ದರೋಡೆ ವೃತ್ತಿಯನ್ನು ಬಿಡುವುದಲ್ಲದೆ ತನ್ನ ತಪ್ಪೊಪ್ಪಿಕೊಂಡು,
ಹಿಂದೆ ತಾನು ಮಾಡಿದ ಅಪರಾಧಗಳಿಗೆ ಶಿಕ್ಷೆಯನ್ನು ಅನುಭವಿಸುತ್ತಾನೆ.
ಹೀಗೆ ದುಷ್ಟರನ್ನೂ ,ದರೋಡೆಕೋರರನ್ನೂ,ಕೆಟ್ಟ ಭಾವನೆಯವರನ್ನು
ಪರಿವರ್ತಿಸಬಲ್ಲದು ಈ ರಕ್ಷೆ .ಇಂತಹಾ ಪ್ರೀತಿ ಸ್ನೇಹ ಸೌಹಾರ್ಧ
ಐಕ್ಯತೆಯನ್ನು ಗಟ್ಟಿಗೊಳಿಸುವ
ರಕ್ಷಾಬಂಧನದ ಹಾಗೂ ವರಮಹಾ ಲಕ್ಷ್ಮಿ ಹಬ್ಬದ ಹಾರ್ಧಿಕ
ಶುಭಾಶಯಗಳು ನಮ್ಮೆಲ್ಲಾ ಸ್ನೇಹಬಳಗಕ್ಕೂ ....... --