Mar 1, 2016

ಬದ್ಧತೆ 

ಎಲೆ ಉದುರಿತೆಂದು
ಮರ ಮರುಗದು
ಎಲೆಯೂ ಉದುರಿದೆನೆಂದು
ಕೊರಗದೇ ಕರಗಿ
ಮುಂದಿನ ಚಿಗುರಿಗೇ
ಮರದ ಬೇರಿಗೆ ತನುವಾಗಿ
ಸ್ವಾರ್ಥ ಮೆರೆವಗೇ
ಸಹಕಾರ ಸೌಹಾರ್ದತೆಯ
ತತ್ವ ಸಾರುವುದು