Aug 20, 2013

ಚಿಗುರದ  ಒನಕೆ


ಹಲವು ಹಿರಿತನ ಮರವಾದಂತೆ,
ನೆರಳ ಕಡೆಗಣಿಸಿ
ಕಿರಿತನದ ಅನಾದರಕೆ
ಸೋತು ಸೊರಗಿ
ಅಜ್ಞಾನಕೆ ಮರುಗಿ
ದುರಾಸೆಗೆ ಕೊರಗಿ
ಕೊರಡಾಗಿ
ಚಿಗುರದ ಒನಕೆಗಳಿಗಾಗಿ
ಪರಿತಪಿಸುತ
ಅಜ್ಞಾನದ ತೆರೆ ಸರಿಸಲು
ಹೊಂದಿಕೆಯ ಕೈಯ್ಯಾಡಿಸಲು
ಕೈಯ್ಯನ್ನೇ ಕತ್ತರಿಸಿ
ಹರಿವ ನೆತ್ತರನು, ನೋವನು  
ಅರಿಯದಂತೆ  ಸರಿದು

ಕೈ ಆಡಿಸಿದಂತೆ
ಕುಣಿವ ಒನಕೆಗಳೇ
ಮರದ ಒಂದೊಂದು ಕೊಂಬೆ
ನೀವೆಂದು ಮರೆವುದೇಕೋ .......???

ಹಲವು ಹಿರಿಮರಕೆ 
ಕೊಂಬೆಗಳೆಲ್ಲ ನನ್ನವೇ.... 
ಎಂಬ ಅರಿವಿದ್ದೂ
ಹಲವನು 
ಬರಡಾಗಿಸುವ ಹೆಬ್ಬಯಕೆಗೆ
ಬಲಿಯಾಗಿ
ಬಾಡುವ ಭಯಕೆ
ಹಲವು ಕೊಂಬೆ.. 
 ಬೇರ್ಪಟ್ಟು 
ಬೇರೆಡೆ ಬೇರ್ಬಿಟ್ಟು
ತನ್ನ ಅಸ್ತಿತ್ವವನು
ಉಳಿಸಿಕೊಳ್ಳಲು
ಹೆಣಗುವ ಸೆಣೆಸಾಟಕೆ 
ತನ್ನ ಮರವೇ
ಕೊಡಲಿಕಾವಾಗಿ 
ಬರದಿರಲೆಂಬ
ಬೇಡಿಕೆಯ ಮೊರೆ
ಸೃಷ್ಠಿಕರ್ತನಲಿ....
ಮರಕೇಕೆ ತನ್ನ ಸಸಿತನದ
ಮರೆವೋ....!!!  ಅರಿಯದು...       

6 comments:

  1. ಈ ಜಗದ ವಿಪರ್ಯಾಸವನ್ನು ನಿರೂಪಿಸುವ ಈ ನಿಮ್ಮ ಕವನ ಇಷ್ಟವಾಯಿತು.

    ReplyDelete
  2. sunaath sir,nimma takshanada
    vicharapoorna pratikriyege mattu
    nimage ishtavaagiddakke
    aatmiya dhanyavaadagalu.

    ReplyDelete
  3. ತನ್ನ ಮರವೇ
    ಕೊಡಲಿಕಾವಾಗಿ
    ಬರದಿರಲೆಂಬ
    ಬೇಡಿಕೆಯ ಮೊರೆ
    ಸೃಷ್ಠಿಕರ್ತನಲಿ....

    ಇಷ್ಟವಾದ ಸಾಲುಗಳು....

    ReplyDelete
  4. venu vinod ravare nimage
    aatmiya svaagata.
    nimma uttma pratikriyegaagi
    dhanyavaadagalu.

    ReplyDelete
  5. [ಹಲವು ಕೊಂಬೆ..
    ಬೇರ್ಪಟ್ಟು
    ಬೇರೆಡೆ ಬೇರ್ಬಿಟ್ಟು
    ತನ್ನ ಅಸ್ತಿತ್ವವನು
    ಉಳಿಸಿಕೊಳ್ಳಲು
    ಹೆಣಗುವ ಸೆಣೆಸಾಟಕೆ
    ತನ್ನ ಮರವೇ
    ಕೊಡಲಿಕಾವಾಗಿ ]

    ಬೇರ್ಪಟ್ಟ ಕೊಂಬೆ ಬೇರೆಡೆ ಬೇರ್ಬಿಟ್ಟು ತನ್ನ ಅಸ್ತಿತ್ವಕಾಗಿ ಹೆಣಗಾಟ| ತನ್ನ ಮರವೇ ಕೊಡಲಿಯ ಕಾವಾಗಬಹುದೆಂಬ ಆತಂಕ!!
    ಅದ್ಭುತ!!

    ReplyDelete
  6. sir,nimma uttama pratikriyegaagi aatmiya dhanyavaadagalu.

    ReplyDelete