Aug 14, 2015

ಸಿಂಬಿಯಾದವರು
ಮೆಟ್ಟಿಲೇರುತ್ತಿರುವವರ ಮೇಲೆಲ್ಲಾ
ಒಂದೊಂದು ಗೂಬೆಗಳ ಹೊರಿಸಿ
ಎಲ್ಲರಿಂದಲೂ ನಂಬಿಕೆಯ ದೂರವಿರಿಸಿ
ಗೂಬೆಗಳ ಹೊತ್ತವರ ತಾ ಹೊಕ್ಕು
ಕೆಕ್ಕರಿಸಿ ನೋಡುವಂತಿರಿಸಿ
ನಂಬಿಕೆಯನೇ ಬೆಪ್ಪಾಗಿಸಿ
ದೂರೀಕರಿಸಿದವರ ಒಳಸರಿದು
ಪಾಪದವನ ಪರಕೀಯ ನೆಂದೆನಿಸಿ
ಸಭೆಯಲಿ ಸಭ್ಯತನವನು ಮೆರೆವ  
ನಾಜೋಕೇ ... ನೀ .. ಜೋಕೇ ... !
ಬಣ್ಣ ಬಯಲಾಗಿದೀತು  ಒಮ್ಮೆ  
ಗೋಸುಂಬೆ ಎಂದರಿವ  
ಸಮಯವೂ ದೂರವಿಲ್ಲ. 
ಇಲ್ಲಾ ...,ಬಣ್ಣ ಬಯಲಾಗಿತ್ತು  ಒಮ್ಮೆ ,
ಗೋಸುಂಬೆ ಎಂಬುದೂ
ವೇದ್ಯವಾಗಿತ್ತಾದರೂ 
ಸಾಮ್ರಾಜ್ಯ  ಸ್ತಾಪಿಸಿಯಾಗಿದೆಯಲ್ಲ ,
ಸಾಮ್ರಾಟನ ಎದುರು
ಸಣ್ಣವರಾಗುವ ಬದಲು
ಗೆದ್ದೆತ್ತಿನ ಬಾಲ ಹಿಡಿದೆತ್ತಿ,
ಬಣ್ಣ ಪರದೆ ಇರದೇ ಮೇರುನಟರಾಗಿ
ಮೆರೆದಾಡುವರು ಕೂಟದಲಿ
ಗೂಬೆಗಳ ಹೊತ್ತವರು ,ಸ್ವಂತಿಕೆ ಸತ್ತವರು 
ಗೋಸುಂಬೆಗೇ ಸಿಂಬಿಯಾದವರು 

4 comments:

  1. ಪ್ರತಿಕ್ರಿಯೆ ನೀಡಲು ಪದವೇ ಹೊಳೆಯುತ್ತಿಲ್ಲ. ಬೆಳೆಯುವವರ ಮೇಲೆ ಇವೆಲ್ಲಾ ಇದ್ದದ್ದೇ. ಕೆಲವನ್ನೆಲ್ಲಾ ಕಡೆಗಣಿಸಬೇಕಷ್ಟೆ. ಒಮ್ಮೊಮ್ಮೆ ನನ್ನ ಅನುಭವವೂ ಹೀಗೆಯೇ. ಪ್ರಾಣವನ್ನು ಪಣವಿಟ್ಟು ಹೆಣಗಿ ಒಂದು ಕಾರ್ಯಕ್ರಮ ಮಾಡಿ ಯಶಸ್ಸಿನ ಹೊಸಿಲಲ್ಲಿರುವಾಗ ಕೆಲವರ ಮಾತು ಪಾತಾಳದಲ್ಲಿ ಕುಸಿಯುವಂತೆ ಮಾಡಿಬಿಡುತ್ತೆ.! ಆದರೆ ಪ್ರಾಮಾಣಿಕ ಶ್ರಮ ವ್ಯರ್ಥವಾಗಲಾರದು. ಅದರ ಬೆಲೆ ಇದ್ದೇ ಇದೆ.

    ReplyDelete
  2. ಪದಗಳ ಬಳಕೆ ಹಾಗು ರಚನಾಕ್ರಮ ತುಂಬ ಸುಂದರವಾಗಿವೆ, ಕವನದ ತಿರುಳಿಗೆ ಸಮರ್ಪಕವಾಗಿವೆ. ನಿಮಗೆ ಅಭಿನಂದನೆಗಳು ಹಾಗು ಧನ್ಯವಾದಗಳು.

    ReplyDelete
  3. sir nimma uttama pratikriyege dhanyavadagalu.

    ReplyDelete
  4. sir nimma uttama pratikriye haagu prothsahakkaagi dhanyavadagalu.

    ReplyDelete